Monday 19 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 37 - 39


ತತಃ ಸ ಮಗ್ನಾಮಲಯೋ ಲಯೋದಧೌ ಮಹೀಂ ವಿಲೋಕ್ಯಾsಶು ಹರಿರ್ವರಾಹಃ ।
ಭೂತ್ವಾ ವಿರಿಞ್ಚಾರ್ಥ ಇಮಾಂ ಸಶೈಲಾಮುದ್ ಧೃತ್ಯ ವಾರಾಮುಪರಿ ನ್ಯಧಾತ್ ಸ್ಥಿರಮ್ ॥೩.೩೭॥

ಆಯಿತು ಬ್ರಹ್ಮಾಂಡ ದೇವತೆಗಳು ಇತರ ಸೃಷ್ಟಿಯ ಆಟ,
ನಾರಾಯಣ ನೋಡಿದ ಭೂಮಿ ಮುಳುಗುತ್ತಿರುವ ನೋಟ.
ವರಾಹ ತಾನಾಗಿ ಪ್ರಳಯ ಸಮುದ್ರವ ಹೊಕ್ಕ ರೂಪ,
ಬ್ರಹ್ಮಗಾಗಿ  ಭೂಮಿಯ ಎತ್ತಿ ಗಟ್ಟಿಯಾಗಿ ಇಟ್ಟ ತಾ  ಭೂಪ.

ಅಥಾಬ್ಜನಾಭಪ್ರತಿಹಾರಪಾಲೌ ಶಾಪಾತ್ ತ್ರಿಶೋ ಭೂಮಿತಳೇsಭಿಜಾತೌ ।
ದಿತ್ಯಾಂ ಹಿರಣ್ಯಾವಥ ರಾಕ್ಷಸೌ ಚ ಪೈತೃಷ್ವಸೇಯೌ ಚ ಹರೇಃ ಪರಸ್ತಾತ್ ॥೩.೩೮॥

ಭಗವಂತನ ದ್ವಾರಪಾಲಕ ಜಯವಿಜಯರಿಗೆ ಶಾಪ,
ಮೂರು ಜನ್ಮ ಹರಿವೈರಿಗಳಾಗಿ ಹುಟ್ಟಿಬರುವ ತಾಪ.
ಹಿರಣ್ಯಕಶಿಪು ಹಿರಣ್ಯಾಕ್ಷರಾದರು ಆದಿಯಲ್ಲಿ,
ರಾವಣ ಕುಂಭಕರ್ಣರಾದರು ಮಧ್ಯದಲ್ಲಿ,
ಶಿಶುಪಾಲ ದಂತವಕ್ರರಾದರು ಅಂತ್ಯದಲ್ಲಿ.

ಹತೋ ಹಿರಣ್ಯಾಕ್ಷ ಉದಾರವಿಕ್ರಮೋ ದಿತೇಃ ಸುತೋ ಯೋsವರಜಃ ಸುರಾರ್ಥೇ ।
ಧಾತ್ರಾsರ್ಥಿತೇನೈವ ವರಾಹರೂಪಿಣಾ ಧರೋದ್ಧೃತೌ ಪೂರ್ವಹತೋsಬ್ಜಜೋದ್ಭವಃ ॥೩.೩೯॥

ದಿತಿಪುತ್ರರಲ್ಲಿ ಕಿರಿಯವನಾದ ಬಲಶಾಲಿ ಹಿರಣ್ಯಾಕ್ಷನಾತ,
ವರಾಹರೂಪಿ  ಭುವಿಯ ಎತ್ತುವ ಕಾಲದಿ ಹತನಾದನಾತ.
ಹಿಂದೊಮ್ಮೆ ಭೂಮಿ ಕುಸಿಯುವಾಗ ಎತ್ತಿದ್ದ ಭಗವಂತ,
ಆಗ ಹತನಾದ ಹಿರಣ್ಯಾಕ್ಷನವನು ಬ್ರಹ್ಮದೇವನ ಪುತ್ರನಾತ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula