ಏವಂ ಪುನಃ ಸೃಜತೇ ಸರ್ವಮೇತದನಾದ್ಯನನ್ತೋ ಹಿ ಜಗತ್ ಪ್ರವಾಹಃ ।
ನಿತ್ಯಾಶ್ಚ ಜೀವಾಃ ಪ್ರಕೃತಿಶ್ಚ ನಿತ್ಯಾ ಕಾಲಶ್ಚ ನಿತ್ಯಃ ಕಿಮು
ದೇವದೇವಃ ॥೩.೩೨॥
ಹೀಗೆ ಭಗವಂತನ
ಸೃಷ್ಟಿಯದು ಅನವರತ ಅಬಾಧಿತ,
ಜೀವರು ನಿತ್ಯ,ಪ್ರಕೃತಿ ನಿತ್ಯ,ಕಾಲ ನಿತ್ಯ,ದೇವರು ನಿತ್ಯರಲ್ಲಿ
ನಿತ್ಯ.
ಯಥಾ ಸಮುದ್ರಾತ್ ಸರಿತಃ ಪ್ರಜಾತಾಃ ಪುನಸ್ತಮೇವ ಪ್ರವಿಶನ್ತಿ ಶಶ್ವತ್
।
ಏವಂ ಹರೇರ್ನಿತ್ಯಜಗತ್ ಪ್ರವಾಹಸ್ತಮೇವ ಚಾಸೌ ಪ್ರವಿಶತ್ಯಜಸ್ರಮ್
॥೩.೩೩॥
ಹೇಗೆ ನದಿಗಳ
ಮೂಲವದು ಕಡಲು,
ಮತ್ತೆ ಸೇರುತ್ತವೋ
ಅದೇ ಕಡಲ ಒಡಲು.
ಭಗವಂತನಿಂದ ಹೊರಡುವ
ಜಗತ್ತಿನ ಪ್ರವಾಹ,
ಮತ್ತವನನ್ನೇ
ಹೊಂದುವವು ಮರು ಆಶ್ರಯ.
ಏವಂ ವಿದುರ್ಯೇ ಪರಮಾಮನನ್ತಾಮಜಸ್ಯ ಶಕ್ತಿಂ ಪುರುಷೋತ್ತಮಸ್ಯ ।
ತಸ್ಯ ಪ್ರಸಾದಾದಥ ದಗ್ಧದೋಷಾಸ್ತಮಾಪ್ನುವನ್ತ್ಯಾಶು ಪರಂ ಸುರೇಶಮ್
॥೩.೩೪॥
ಈ ರೀತಿಯ ಹರಿಯ
ಪುರುಷೋತ್ತಮತ್ವದ ಮರ್ಮ,
ಬಿತ್ತಿ ಸಮರ್ಥ
ಜ್ಞಾನ ಕಳೆಯುತ್ತದೆ ಬುತ್ತಿಯಾದ ಕರ್ಮ.
ಭಗವದ್
ಅನುಗ್ರಹದಿಂದ ಕಳೆಯುತ್ತದೆ ದೋಷ,
ಲಭಿಸುವುದು
ಯೋಗ್ಯತೆಯಂತೆ ಅವನ ಸಹವಾಸ.
ದೇವಾನಿಮಾನ್ ಮುಕ್ತಸಮಸ್ತದೋಷಾನ್ ಸ್ವಸನ್ನಿಧಾನೇ ವಿನಿವೇಶ್ಯ ದೇವಃ ।
ಪುನಸ್ತದನ್ಯಾನಧಿಕಾರಯೋಗ್ಯಾಂಸ್ತತ್ತದ್ಗಣಾನೇವ ಪದೇ ನಿಯುಙ್ಕ್ತೇ
॥೩.೩೫॥
ಈ ರೀತಿ
ದೋಷಮುಕ್ತರಾದ ದೇವತಾವೃಂದ,
ಲಭ್ಯವವರಿಗೆ ಭಗವದ್ಸನ್ನಿಧಾನದ ಆನಂದ.
ಬೇರೆ ಅರ್ಹ
ತಾರತಮ್ಯೋಕ್ತ ದೇವತಾ ಗಣ,
ಆಗುತ್ತಾರೆ ವಿವಿಧ
ಪದವಿಗಳಲ್ಲಿ ನಿಯೋಜನ.
ಪುನಶ್ಚ ಮಾರೀಚತ ಏವ ದೇವಾ ಜಾತಾ ಅದಿತ್ಯಾಮಸುರಾಶ್ಚ ದಿತ್ಯಾಮ್ ।
ಗಾವೋ ಮೃಗಾಃ ಪಕ್ಷ್ಯುರಗಾದಿಸತ್ತ್ವಾ ದಾಕ್ಷಾಯಣೀಷ್ವೇವ ಸಮಸ್ತಶೋsಪಿ
॥೩.೩೬॥
ಕಾಶ್ಯಪ
ಅದಿತಿಯರಲ್ಲಿ ಆದಿತ್ಯರು,
ದಿತಿಯಲ್ಲಿ
ದೈತ್ಯರು ಹುಟ್ಟಿ ಬಂದರು.
ಇತರ ದಕ್ಷ
ಪುತ್ರಿಯರಲ್ಲಿ ಗೋವು ಮೃಗ ಪಕ್ಷಿ ಹಾವು,
ಮೊದಲಾಯ್ತು ಪ್ರಾಣಿ ಜೀವಿಗಳ ಸೃಷ್ಟಿಯ ಹರವು.
[Contributed by Shri Govind
Magal]
No comments:
Post a Comment
ಗೋ-ಕುಲ Go-Kula