Sunday 18 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 32 - 36


ಏವಂ ಪುನಃ ಸೃಜತೇ ಸರ್ವಮೇತದನಾದ್ಯನನ್ತೋ ಹಿ ಜಗತ್ ಪ್ರವಾಹಃ ।
ನಿತ್ಯಾಶ್ಚ ಜೀವಾಃ ಪ್ರಕೃತಿಶ್ಚ ನಿತ್ಯಾ ಕಾಲಶ್ಚ ನಿತ್ಯಃ ಕಿಮು ದೇವದೇವಃ ॥೩.೩೨॥

ಹೀಗೆ ಭಗವಂತನ ಸೃಷ್ಟಿಯದು ಅನವರತ ಅಬಾಧಿತ,
ಜೀವರು ನಿತ್ಯ,ಪ್ರಕೃತಿ ನಿತ್ಯ,ಕಾಲ ನಿತ್ಯ,ದೇವರು ನಿತ್ಯರಲ್ಲಿ ನಿತ್ಯ.

ಯಥಾ ಸಮುದ್ರಾತ್ ಸರಿತಃ ಪ್ರಜಾತಾಃ ಪುನಸ್ತಮೇವ ಪ್ರವಿಶನ್ತಿ ಶಶ್ವತ್ ।
ಏವಂ ಹರೇರ್ನಿತ್ಯಜಗತ್ ಪ್ರವಾಹಸ್ತಮೇವ ಚಾಸೌ ಪ್ರವಿಶತ್ಯಜಸ್ರಮ್ ॥೩.೩೩॥

ಹೇಗೆ ನದಿಗಳ ಮೂಲವದು ಕಡಲು,
ಮತ್ತೆ ಸೇರುತ್ತವೋ ಅದೇ ಕಡಲ ಒಡಲು.
ಭಗವಂತನಿಂದ ಹೊರಡುವ ಜಗತ್ತಿನ ಪ್ರವಾಹ,
ಮತ್ತವನನ್ನೇ ಹೊಂದುವವು ಮರು ಆಶ್ರಯ.

ಏವಂ ವಿದುರ್ಯೇ ಪರಮಾಮನನ್ತಾಮಜಸ್ಯ ಶಕ್ತಿಂ ಪುರುಷೋತ್ತಮಸ್ಯ ।
ತಸ್ಯ ಪ್ರಸಾದಾದಥ ದಗ್ಧದೋಷಾಸ್ತಮಾಪ್ನುವನ್ತ್ಯಾಶು ಪರಂ ಸುರೇಶಮ್ ॥೩.೩೪॥

ಈ ರೀತಿಯ ಹರಿಯ ಪುರುಷೋತ್ತಮತ್ವದ ಮರ್ಮ,
ಬಿತ್ತಿ ಸಮರ್ಥ ಜ್ಞಾನ ಕಳೆಯುತ್ತದೆ ಬುತ್ತಿಯಾದ ಕರ್ಮ.
ಭಗವದ್ ಅನುಗ್ರಹದಿಂದ ಕಳೆಯುತ್ತದೆ ದೋಷ,
ಲಭಿಸುವುದು ಯೋಗ್ಯತೆಯಂತೆ ಅವನ ಸಹವಾಸ.

ದೇವಾನಿಮಾನ್ ಮುಕ್ತಸಮಸ್ತದೋಷಾನ್ ಸ್ವಸನ್ನಿಧಾನೇ ವಿನಿವೇಶ್ಯ ದೇವಃ ।
ಪುನಸ್ತದನ್ಯಾನಧಿಕಾರಯೋಗ್ಯಾಂಸ್ತತ್ತದ್ಗಣಾನೇವ ಪದೇ ನಿಯುಙ್ಕ್ತೇ ॥೩.೩೫॥

ಈ ರೀತಿ ದೋಷಮುಕ್ತರಾದ ದೇವತಾವೃಂದ,
ಲಭ್ಯವವರಿಗೆ  ಭಗವದ್ಸನ್ನಿಧಾನದ ಆನಂದ.
ಬೇರೆ ಅರ್ಹ ತಾರತಮ್ಯೋಕ್ತ ದೇವತಾ ಗಣ,
ಆಗುತ್ತಾರೆ ವಿವಿಧ ಪದವಿಗಳಲ್ಲಿ ನಿಯೋಜನ.

ಪುನಶ್ಚ ಮಾರೀಚತ ಏವ ದೇವಾ ಜಾತಾ ಅದಿತ್ಯಾಮಸುರಾಶ್ಚ ದಿತ್ಯಾಮ್ ।
ಗಾವೋ ಮೃಗಾಃ ಪಕ್ಷ್ಯುರಗಾದಿಸತ್ತ್ವಾ ದಾಕ್ಷಾಯಣೀಷ್ವೇವ ಸಮಸ್ತಶೋsಪಿ ॥೩.೩೬॥

ಕಾಶ್ಯಪ ಅದಿತಿಯರಲ್ಲಿ ಆದಿತ್ಯರು,
ದಿತಿಯಲ್ಲಿ ದೈತ್ಯರು ಹುಟ್ಟಿ ಬಂದರು.
ಇತರ ದಕ್ಷ ಪುತ್ರಿಯರಲ್ಲಿ ಗೋವು ಮೃಗ ಪಕ್ಷಿ ಹಾವು,
ಮೊದಲಾಯ್ತು  ಪ್ರಾಣಿ ಜೀವಿಗಳ ಸೃಷ್ಟಿಯ ಹರವು.
[Contributed by Shri Govind Magal]

No comments:

Post a Comment

ಗೋ-ಕುಲ Go-Kula