Friday 9 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 08 - 10


ಸರ್ವಸ್ಯ ನಿರ್ಣಯಸುವಾಕ್ಯಸಮುದ್ಧೃತೀ ತು ಸ್ವಧ್ಯಾಯಯೋರ್ಹರಿಪದಸ್ಮರಣೇನ ಕೃತ್ವಾ ।
ಆನನ್ದತೀರ್ಥವರನಾಮವತೀ ತೃತೀಯಾ ಭೌಮೀ ತನುರ್ಮರುತ ಆಹ ಕಥಾಃ ಪರಸ್ಯ ॥೩.೦೮॥

ಮೊದಲಧ್ಯಾಯದಲ್ಲಿ ಸರ್ವಶಾಸ್ತ್ರಾರ್ಥಸಾರ,
ಎರಡನೇ ಅಧ್ಯಾಯದಲ್ಲಿ ವಾಕ್ಯೋದ್ಧಾರ ಧಾರ,
ಎರಡನ್ನೂ ಮಾಡಿದ ಆನಂದತೀರ್ಥನಾಮಕ ಯತಿ  ಮುಖ್ಯಪ್ರಾಣ,
ಮೂರನೇ ಅಧ್ಯಾಯದ ಕಥೆಗಳ ಆರಂಭಿಸುವ ಗುರಿ  ನಾರಾಯಣ.

(ಗಮನಿಸಿದಾಗ ಈ ಅಧ್ಯಾಯದ ಆಳ ಮತ್ತು ವಿಸ್ತಾರ,
ಸೃಷ್ಟಿ- ಅನುಸರ್ಗ -ಪ್ರಳಯ- ಪ್ರಾದುರ್ಭಾವಗಳ ಸಾರ,
ಎದಿರಾಗುವ ಅನೇಕ ವೈರುಧ್ಯಗಳ ಸಮೀಕರಣ,
ಅವಶ್ಯ ಆಳ ಅಧ್ಯಯನ ಸಿಗಬೇಕಾದರೆ ಹೂರಣ.
ಇಲ್ಲಿರುವದು ಸಂಕ್ಷಿಪ್ತವಾದ ಶ್ಲೋಕಾನುವಾದ,
ಹಸಿವಿದ್ದವರು ಆಳಕ್ಕಿಳಿದು ಮಾಡಲಿ ಶೋಧ).



ವ್ಯೂಢಶ್ಚತುರ್ಧಾ ಭಗವಾನ್ ಸ ಏಕೋ ಮಾಯಾಂ ಶ್ರಿಯಂ ಸೃಷ್ಟಿವಿಧಿತ್ಸಯಾssರ ।
ರೂಪೇಣ ಪೂರ್ವೇಣ ಸ ವಾಸುದೇವನಾಮ್ನಾ ವಿರಿಞ್ಚಮ್ ಸುಷುವೇ ಚ ಸಾsತಃ ॥೩.೦೯॥

ಆ ಒಬ್ಬನೇ ಒಬ್ಬನಾಗಿದ್ದ ಭಗವಂತ ನಾರಾಯಣ,
ಆದ ವಾಸುದೇವ ಪ್ರದ್ಯುಮ್ನ ಅನಿರುದ್ಧ ಸಂಕರ್ಷಣ.
ವಾಸುದೇವ ರೂಪ ಕೂಡಿತು ಲಕ್ಷ್ಮಿಯ ಮಾಯಾ ಎಂಬ ರೂಪ,
ಬ್ರಹ್ಮನ ಸೃಜಿಸಿ ಮಾಡಿದ ದಾಂಪತ್ಯದ ಮೊದಲನೇ ಪ್ರತಾಪ.

ಸಙ್ಕರ್ಷಣಾಚ್ಛಾಪಿ ಜಯಾತನೂಜೋ ಬಭೂವ ಸಾಕ್ಷಾದ್ ಬಲಸಂವಿದಾತ್ಮಾ ।
ವಾಯುರ್ಯ ಏವಾಥ ವಿರಿಞ್ಚನಾಮಾ ಭವಿಷ್ಯಆದ್ಯೋ ನ ಪರಸ್ತತೋ ಹಿ ॥೩.೧೦॥

ಸಂಕರ್ಷಣನಾದಾಗ ಭಗವಂತ ಲಕ್ಷ್ಮಿಯಾದಳು ಜಯ,
ಬಲ ಜ್ಞಾನ ಮೈವೆತ್ತು ಬಂದ  ಮುಖ್ಯಪ್ರಾಣನ ಉದಯ.
ಇವನೇ ಆಗುವ ಮುಂದಿನ ಕಲ್ಪದ ಬ್ರಹ್ಮ,
ಹಾಗೆಂದೇ ಎರಡನೇ ಮಗನ ಹೆತ್ತ ಮರ್ಮ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula