Tuesday 6 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 03

ಜಯತ್ಯಸಙ್ಖ್ಯೋರುಬಲಾಮ್ಬುಪೂರೋ ಗುಣೋಚ್ಚರತ್ನಾಕರ ಆತ್ಮವೈಭವಃ ।

ಸದಾ ಸದಾತ್ಮಜ್ಞನದೀಭಿರಾಪ್ಯಃ ಕೃಷ್ಣಾವತಾರೋ ಹರಿರೇಕಸಾಗರಃ ॥೩.೦೩॥

ಶ್ರೀಕೃಷ್ಣ ಅಪಾರ ಅಸೀಮ ಗುಣಗಳ ಸಾಗರ,
ಖಾಲಿಯಾಗದ ಗುಣರತ್ನ ಮುತ್ತುಗಳ ಆಗರ.
ಸಾಗರದ ಆಳ ವ್ಯಾಪ್ತಿಗೆ ಹೋಲಿಕೆಯಿಲ್ಲ,
ಕೃಷ್ಣನ ಗುಣ ಬಲಗಳಿಗೆ ಸರಿಸಾಟಿಯಿಲ್ಲ.
ಎಲ್ಲ ಹರಿವ ನದಿಗಳು ಸೇರುವವು ಕಡೆಗೆ ಕಡಲು,
ಎಲ್ಲ ಆತ್ಮಜ್ಞಾನಿಗಳು ಸೇರುವರು ಕೃಷ್ಣನ ಒಡಲು.
ಈ ಕೃಷ್ಣನೆಂಬ ಜ್ಞಾನಾನಂದ ಸಾಗರವದು ಅನಂತ,
ಜ್ಞಾನವಿದಿರಲೆಂದು ಆಚಾರ್ಯರ ಸ್ತೋತ್ರ ಅನವರತ.
[Contributed by Shri Govind Magal]


No comments:

Post a Comment

ಗೋ-ಕುಲ Go-Kula