Monday 5 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 02


ಜಯತ್ಯಜೋSಕ್ಷೀಣಸುಖಾತ್ಮಬಿಮ್ಬಃ ಸ್ವೈಶ್ವರ್ಯಕಾನ್ತಿಪ್ರತತಃ ಸದೋದಿತಃ ।
ಸ್ವಭಕ್ತಸನ್ತಾಪದುರಿಷ್ಟಹನ್ತಾ ರಾಮಾವತಾರೋ ಹರಿರೀಶಚನ್ದ್ರಮಾಃ ॥೩.೦೨॥

ಹುಟ್ಟು ಸಾವಿರುವ -ರಾತ್ರಿ ಬಾನು ಬೆಳಗುವ ಚಂದ್ರ,
ಹುಟ್ಟು ಸಾವಿರದ -ಸದಾ ಬೆಳಗುವ ಶ್ರೀರಾಮಚಂದ್ರ.
ಚಂದ್ರನಿಗುಂಟು ಸೀಮಿತ ಬೆಳಕು ಕ್ಷಯವಾಗೋ ಬಿಂಬ,
ರಾಮಚಂದ್ರನೋ ಅಸೀಮ ಅಕ್ಷಯ ಎಲ್ಲರೊಳಿಹ ಬಿಂಬ.
ಸಜ್ಜನರಿಂದ ಪ್ರಾರ್ಥಿಸಲ್ಪಡುವ ಭೂಪ,
ಕಳೆದುಬಿಡುವ ತನ್ನ ಭಕ್ತರ ಬೇಗೆ ಸಂತಾಪ.
ಚಂದ್ರನದದು ಕ್ಷೀಣಿಸುವ ಅಶಾಶ್ವತ ಕಾಂತಿ,
ರಾಮಚಂದ್ರ ಶಾಶ್ವತ ಕಾಂತಿ-ಅವನಿಗಾಗಲಿ ಪ್ರೀತಿ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula