ತೃತಿಯೋsಧ್ಯಾಯಃ
[ಸರ್ಗಾನುಸರ್ಗಲಯಪ್ರಾದುರ್ಭಾವನಿರ್ಣಯಃ]
(ಮೊದಲಿಗೆ
ಬಂದಿರುವ ವ್ಯಾಸ ರಾಮ ಕೃಷ್ಣ ಸ್ತುತಿ,
ಹೇಳುತ್ತದೆ ವೇದಾಂತ ಪ್ರಮೇಯದ ದಿವ್ಯ ಮತಿ)
ಜಯತ್ಯಜೋsಖಣ್ಡಗುಣೋರುಮಣ್ಡಲಃ ಸದೋದಿತೋ ಜ್ಞಾನಮರೀಚಿಮಾಲೀ ।
ಸ್ವಭಕ್ತಹಾರ್ದೋಚ್ಚತಮೋನಿಹನ್ತಾ ವ್ಯಾಸಾವತಾರೋ ಹರಿರಾತ್ಮಭಾಸ್ಕರಃ
॥೩.೦೧॥
ಸುತ್ತ ಮಂಡಲವಿದ್ದು
ನಿತ್ಯ ಹೊಳೆಯುವ ಸೂರ್ಯ,
ಜ್ಞಾನಮಂಡಲವಿದ್ದು
ಗುಣ ಪ್ರಕಾಶಿಸುವ ವ್ಯಾಸಾರ್ಯ.
ಯಾವಾಗಲೂ ಬೆಳಗುವ
ಅವ ಸೂರ್ಯ,
ಸೂರಿಗಳಿಂದ
ಸ್ತುತಿಸಲ್ಪಡುವವ ವ್ಯಾಸಾರ್ಯ.
ಸೂರ್ಯನ ಕಿರಣವದು
ಬೆಳಕಿನ ಮೂಲ -ಪ್ರಾಕೃತ,
ವ್ಯಾಸಕಿರಣವದು ಅಜ್ಞಾನಕ್ಕೆ ಶೂಲ -
ಅಪ್ರಾಕೃತ.
ಸೂರ್ಯನಿಂದ ಹೊರ
ಜಗತ್ತಿಗಷ್ಟೇ - ಪ್ರಕಾಶ,
ವ್ಯಾಸರು
ಬೆಳಗುತ್ತಾರೆ ಹೊರಗಷ್ಟಲ್ಲದೇ ಹೃದಯಾಕಾಶ.
ಇಂತಹ ವ್ಯಾಸರವರು
ಉತ್ಕೃಷ್ಟ,
ಆಚಾರ್ಯರ ಅರಿವದು
ಸುಸ್ಪಷ್ಟ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula