‘ಮುಕ್ತಿರ್ನಿತ್ಯಾ ತಮಶ್ಚೈವ ನಾsವೃತ್ತಿಃ ಪುನರೇತಯೋಃ ।
‘ದೇವಾನಾಂ ನಿರಯೋ ನಾಸ್ತಿ ತಮಶ್ಚಾಪಿ
ಕಥಞ್ಚನ ॥೧.೮೮॥
ಮುಕ್ತಿ - ತಮಸ್ಸಿಗೆ ಹೋದವರಿಗಿಲ್ಲ ವಾಪಸಾತಿ,
ಮತ್ತೆ ಬರಲಾಗದ ಆಯಾ ಸ್ಥಾನಗಳೇ ಗತಿ,
ದೇವತೆಗಳಿಗೆಲ್ಲಿ(ಇಲ್ಲ) ತಮಸ್ಸಿನ ಭೀತಿ.
‘ನಾಸುರಾಣಾಂ ತಥಾ ಮುಕ್ತಿಃ ಕದಾಚಿತ್
ಕೇನಚಿತ್ ಕ್ವಚಿತ್ ।
‘ಮಾನುಷಾಣಾಂ ಮಧ್ಯಮಾನಾಂ ನೈವೈತದ್
ದ್ವಯಮಾಪ್ಯತೇ ॥೧.೮೯॥
ಅಸುರರಿಗೆ ಹಿಂದಾಗಿಲ್ಲ ಮುಕ್ತಿ,
ಆಗಲ್ಲ ಎಂದೆಂದೂ ಎಂದೇ ಉಕ್ತಿ,
ಅಂಧಂತಮಸ್ಸು ಮಧ್ಯಮ ಮನುಷ್ಯರಿಗಾಗಲ್ಲ,
ಹಾಗೇ ಸುಖ ರೂಪದ ಮೋಕ್ಷವೂ ಆಗಲ್ಲ.
‘ಅಸುರಾಣಾಂ ತಮಃ ಪ್ರಾಪ್ತಿಸ್ತದಾ ನಿಯಮತೋ
ಭವೇತ್ ।
‘ಯದಾ ತು ಜ್ಞಾನಿಸದ್ಭಾವೇ ನೈವ ಗೃಹ್ಣನ್ತಿ
ತತ್ ಪರಮ್ ॥೧.೯೦॥
ಅಸುರರಿಗೆ ಅಂಧಂತಮಸ್ಸು ಕಟ್ಟಿಟ್ಟ ಬುತ್ತಿ,
ಭಗವದ್ಜ್ಞಾನಕ್ಕೆ ತೆರೆದುಕೊಳ್ಳದ ದೈತ್ಯರಿಗಾಗುವ ಶಾಸ್ತಿ.
‘ತದಾ ಮುಕ್ತಿಶ್ಚ ದೇವಾನಾಂ ಯದಾ
ಪ್ರತ್ಯಕ್ಷಗೋ ಹರಿಃ ।
‘ಸ್ವಯೋಗ್ಯಯೋಪಾಸನಯಾ ತನ್ವಾ ತದ್ಯೋಗ್ಯಯಾ
ತಥಾ ॥೧.೯೧॥
ಯೋಗ್ಯತೆಗೆ ತಕ್ಕುದಾಗಿ ದೊರೆಯುವ ದೇಹ,
ಯೋಗ್ಯತೆಗೆ ತಕ್ಕುದಾದ ಭಗವದ್ಜ್ಞಾನ ದಾಹ,
ಇವೆರಡರಿಂದಲೇ ಆಗುವುದು ಮುಕ್ತಿ ಪ್ರಾಪ್ತ,
ತಪ್ಪದ ಅದ್ಭುತ ಲೆಕ್ಕಾಚಾರ -ತಾರತಮ್ಯೋಕ್ತ.
‘ಸರ್ವೈರ್ಗುಣೈರ್ಬ್ರಹ್ಮಣಾ ತು ಸಮುಪಾಸ್ಯೋ
ಹರಿಃ ಸದಾ ।
‘ಆನನ್ದೋ ಜ್ಞಃ ಸದಾತ್ಮೇತಿ ಹ್ಯುಪಾಸ್ಯೋ
ಮಾನುಷೈರ್ಹರಿಃ ॥೧.೯೨॥
ಎಲ್ಲ ಜೀವರಿಗೂ ಭಗವಂತನ ಸರ್ವಗುಣೋಪಾಸನೆ ಅಸಾಧ್ಯ,
ಸರ್ವಗುಣಗಳ ಉಪಾಸಕನಾಗಿ ಚತುರ್ಮುಖನೊಬ್ಬ ಬಾಧ್ಯ,
ಇನ್ನು ಮನುಷ್ಯರಿಂದ ಹೇಗೆ ಉಪಾಸಿಸಲ್ಪಡುವ ಅವ ಸ್ವಾಮಿ?
ಹೀಗೆ -ಆನಂದ ಜ್ಞಾನ ಸ್ವರೂಪಿ ದೋಷದೂರ ಎಲ್ಲರ ಅಂತರ್ಯಾಮಿ,
ಬ್ರಹ್ಮದೇವನೊಬ್ಬನೇ ಗುಣೋಪಾಸನೆಯ ಮುಖ್ಯ ಅಧಿಕಾರಿ,
ಉಳಿದವರೆಲ್ಲ ತಾರತಮ್ಯೋಕ್ತ -ಮನುಷ್ಯ ಅಧಮ ಅಧಿಕಾರಿ.
[Contributed by
Shri Govind Magal]