Wednesday 29 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 88 - 92

ಮುಕ್ತಿರ್ನಿತ್ಯಾ ತಮಶ್ಚೈವ ನಾsವೃತ್ತಿಃ ಪುನರೇತಯೋಃ ।
ದೇವಾನಾಂ ನಿರಯೋ ನಾಸ್ತಿ ತಮಶ್ಚಾಪಿ ಕಥಞ್ಚನ ॥೧.೮೮॥

ಮುಕ್ತಿ - ತಮಸ್ಸಿಗೆ ಹೋದವರಿಗಿಲ್ಲ ವಾಪಸಾತಿ,
ಮತ್ತೆ ಬರಲಾಗದ ಆಯಾ ಸ್ಥಾನಗಳೇ ಗತಿ,
ದೇವತೆಗಳಿಗೆಲ್ಲಿ(ಇಲ್ಲ) ತಮಸ್ಸಿನ ಭೀತಿ.

ನಾಸುರಾಣಾಂ ತಥಾ ಮುಕ್ತಿಃ ಕದಾಚಿತ್ ಕೇನಚಿತ್ ಕ್ವಚಿತ್ ।
ಮಾನುಷಾಣಾಂ ಮಧ್ಯಮಾನಾಂ ನೈವೈತದ್ ದ್ವಯಮಾಪ್ಯತೇ ॥೧.೮೯॥

ಅಸುರರಿಗೆ ಹಿಂದಾಗಿಲ್ಲ ಮುಕ್ತಿ,
ಆಗಲ್ಲ ಎಂದೆಂದೂ ಎಂದೇ ಉಕ್ತಿ,
ಅಂಧಂತಮಸ್ಸು ಮಧ್ಯಮ ಮನುಷ್ಯರಿಗಾಗಲ್ಲ,
ಹಾಗೇ ಸುಖ ರೂಪದ ಮೋಕ್ಷವೂ ಆಗಲ್ಲ.

ಅಸುರಾಣಾಂ ತಮಃ ಪ್ರಾಪ್ತಿಸ್ತದಾ ನಿಯಮತೋ ಭವೇತ್ ।
ಯದಾ ತು ಜ್ಞಾನಿಸದ್ಭಾವೇ ನೈವ ಗೃಹ್ಣನ್ತಿ ತತ್ ಪರಮ್ ॥೧.೯೦॥

ಅಸುರರಿಗೆ ಅಂಧಂತಮಸ್ಸು ಕಟ್ಟಿಟ್ಟ ಬುತ್ತಿ,
ಭಗವದ್ಜ್ಞಾನಕ್ಕೆ ತೆರೆದುಕೊಳ್ಳದ ದೈತ್ಯರಿಗಾಗುವ ಶಾಸ್ತಿ.




ತದಾ ಮುಕ್ತಿಶ್ಚ ದೇವಾನಾಂ ಯದಾ ಪ್ರತ್ಯಕ್ಷಗೋ ಹರಿಃ ।
ಸ್ವಯೋಗ್ಯಯೋಪಾಸನಯಾ ತನ್ವಾ ತದ್ಯೋಗ್ಯಯಾ ತಥಾ ॥೧.೯೧॥

ಯೋಗ್ಯತೆಗೆ ತಕ್ಕುದಾಗಿ ದೊರೆಯುವ ದೇಹ,
ಯೋಗ್ಯತೆಗೆ ತಕ್ಕುದಾದ ಭಗವದ್ಜ್ಞಾನ ದಾಹ,
ಇವೆರಡರಿಂದಲೇ ಆಗುವುದು ಮುಕ್ತಿ ಪ್ರಾಪ್ತ,
ತಪ್ಪದ ಅದ್ಭುತ ಲೆಕ್ಕಾಚಾರ -ತಾರತಮ್ಯೋಕ್ತ.

ಸರ್ವೈರ್ಗುಣೈರ್ಬ್ರಹ್ಮಣಾ ತು ಸಮುಪಾಸ್ಯೋ ಹರಿಃ ಸದಾ ।
ಆನನ್ದೋ ಜ್ಞಃ ಸದಾತ್ಮೇತಿ ಹ್ಯುಪಾಸ್ಯೋ ಮಾನುಷೈರ್ಹರಿಃ ॥೧.೯೨॥

ಎಲ್ಲ ಜೀವರಿಗೂ ಭಗವಂತನ ಸರ್ವಗುಣೋಪಾಸನೆ ಅಸಾಧ್ಯ,
ಸರ್ವಗುಣಗಳ ಉಪಾಸಕನಾಗಿ ಚತುರ್ಮುಖನೊಬ್ಬ  ಬಾಧ್ಯ,
ಇನ್ನು ಮನುಷ್ಯರಿಂದ ಹೇಗೆ ಉಪಾಸಿಸಲ್ಪಡುವ ಅವ  ಸ್ವಾಮಿ?
ಹೀಗೆ -ಆನಂದ ಜ್ಞಾನ ಸ್ವರೂಪಿ ದೋಷದೂರ ಎಲ್ಲರ ಅಂತರ್ಯಾಮಿ,
ಬ್ರಹ್ಮದೇವನೊಬ್ಬನೇ ಗುಣೋಪಾಸನೆಯ ಮುಖ್ಯ ಅಧಿಕಾರಿ,

ಉಳಿದವರೆಲ್ಲ ತಾರತಮ್ಯೋಕ್ತ -ಮನುಷ್ಯ ಅಧಮ ಅಧಿಕಾರಿ.
[Contributed by Shri Govind Magal]

Tuesday 28 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 83 -87

ಸೃಷ್ಟಿರಕ್ಷಾಹೃತಿಜ್ಞಾನನಿಯತ್ಯಜ್ಞಾನಬನ್ಧನಾನ್ ।
ಮೋಕ್ಷಂ ಚ ವಿಷ್ಣುತಸ್ತ್ವೇವ ಜ್ಞಾತ್ವಾ ಮುಕ್ತಿರ್ನಚಾನ್ಯಥಾ ॥೧.೮೩॥

ಪ್ರಪಂಚದ ಸೃಷ್ಟಿ-ಪಾಲನೆ-ಜ್ಞಾನ-ನಿಯಮನ-ಬಂಧನ,
ಎಲ್ಲದರ ಕೂಲಂಕಷ ತಿಳುವಳಿಕೆಯೇ ಮೋಕ್ಷಕ್ಕೆ ಸಾಧನ.

ವೇದಾಂಶ್ಚ ಪಞ್ಚರಾತ್ರಾಣಿ ಸೇತಿಹಾಸಪುರಾಣಕಾನ್।
ಜ್ಞಾತ್ವಾ ವಿಷ್ಣುಪರಾನೇವ ಮುಚ್ಯತೇ ನಾನ್ಯಥಾ ಕ್ವಚಿತ್ ॥೧.೮೪॥

ವೇದ-ಪಂಚರಾತ್ರ-ಇತಿಹಾಸ-ಪುರಾಣ,
ಎಲ್ಲದರ ಪ್ರತಿಪಾದನೆ ಅದು-ನಾರಾಯಣ,
ಈ ಸಮಗ್ರ ತಿಳಿವಿನಿಂದಲೇ ಜೀವಕ್ಕೆ ಬಿಡುಗಡೆಯ  ಭಾಗ್ಯ,
ಭಗವಂತನ ಗುಣಾಧಿಕ್ಯ ಜ್ಞಾನದಿಂದ ಹೊರತು-ಇಲ್ಲ ಅನ್ಯ ಮಾರ್ಗ.

ಮಾಹಾತ್ಮ್ಯಜ್ಞಾನಪೂರ್ವಸ್ತು ಸುದೃಢಃ ಸರ್ವತೋsಧಿಕಃ।
ಸ್ನೇಹೋ ಭಕ್ತಿರಿತಿ ಪ್ರೋಕ್ತಸ್ತಯಾ ಮುಕ್ತಿರ್ನಚಾನ್ಯಥಾ ॥೧.೮೫॥

ಏನದು ಭಕ್ತಿ? ಏನದರ ಶಕ್ತಿ,
ಆಚಾರ್ಯರು ಕೊಡುವ ಸ್ಪಷ್ಟ ಉಕ್ತಿ,
ಜ್ಞಾನಪೂರ್ವಕವಾದ ಅಧಿಕ ಸ್ನೇಹ-ಪ್ರೀತಿ,
ಈ ಥರದ ಭಕ್ತಿಯಿಂದಲೇ ಲಭ್ಯವದು ಮುಕ್ತಿ.


ತ್ರಿವಿಧಾ ಜೀವಸಙ್ಘಾಸ್ತು ದೇವಮಾನುಷದಾನವಾಃ ।
ತತ್ರ ದೇವಾ ಮುಕ್ತಿಯೋಗ್ಯಾ ಮಾನುಷೇಷೂತ್ತಮಾಸ್ತಥಾ ॥೧.೮೬॥

ಮಧ್ಯಮಾ ಮಾನುಷಾ ಯೇ ತು ಸೃತಿಯೋಗ್ಯಾಃ ಸದೈವ ಹಿ ।
ಅಧಮಾ ನಿರಯಾಯೈವ ದಾನವಾಸ್ತು ತಮೋಲಯಾಃ ॥೧.೮೭॥

ಜೀವರಾಶಿಯಲ್ಲಿನ ಪ್ರಭೇದಗಳು ಮೂರು,
ದೇವತೆಗಳು --ಮನುಷ್ಯರು --ದಾನವರು,
ಇವರಲ್ಲಿ ಭಕ್ತಿ ಮಾಡುವವರು ಯಾರ್ಯಾರು?
ದೇವತೆಗಳು ಮತ್ತು ಮನುಷ್ಯೋತ್ತಮರು.

ಮನುಷ್ಯರಲ್ಲಿ ಮೂರು ವಿಧದ ಸ್ತೋಮ,
ಅವೇ ಉತ್ತಮ - ಮಧ್ಯಮ - ಅಧಮ,
ಉತ್ತಮರದು ಸದಾ ಭಕ್ತಿಯ ನಿಯಮ,
ಮಧ್ಯಮರದು ಅದು ದ್ವಂದ್ವದ ಧಾಮ,
ದ್ವೇಷ ಮಾಡುವವನೇ(ರೇ) ಮನುಷ್ಯಾಧಮ,
ಉತ್ತಮರಿಗೆ ಲಭ್ಯವದು-- ಮೋಕ್ಷ,
ಮಧ್ಯಮರದು ನಿತ್ಯಸಂಸಾರಿಗಳ ಕಕ್ಷ,

ಅಧಮರಿಗೆ ಖಚಿತವದು ತಮಸ್ಸಿನ ಭಿಕ್ಷ.
[Contributed by Shri Govind Magal]

Sunday 26 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 76 - 82

ಭೂಮ್ನೋ ಜ್ಯಾಯಸ್ತ್ವಮಿ’ತಿ ಹ್ಯುಕ್ತಂ ಸೂತ್ರೇಷು ನಿರ್ಣಯಾತ್ ತೇನ ।
ತತ್ ಪ್ರೀತ್ಯೈವ ಚ ಮೋಕ್ಷಃ ಪ್ರಾಪ್ಯಸ್ತೇನೈವ ನಾನ್ಯೇನ ॥೧.೭೬॥

ಬ್ರಹ್ಮಸೂತ್ರದ ಪರಮ ಪ್ರಮಾಣ,
ಎಲ್ಲರಿಗಿಂತ ಅಧಿಕನವ ನಾರಾಯಣ,
ಪಡೆದಾಗಲೇ ಭಗವದನುಗ್ರಹ-ಪ್ರೀತಿ,
ಆನಂತರವೇ ಮೋಕ್ಷವದು ಪ್ರಾಪ್ತಿ,
ಇದನ್ನೇ ಹೇಳುವ ವೇದವಾಣಿಗಳು ಅನೇಕ,
ಆಚಾರ್ಯರು ವಿಶ್ಲೇಷಿಸಿ ಕೊಟ್ಟ ನಿರ್ಧರಿತ ವಾಕ್ಯ.

ನಾಯಮಾತ್ಮಾ ಪ್ರವಚನೇನ ಲಭ್ಯೋ ‘ನ ಮೇಧಯಾ ನ ಬಹುನಾ ಶ್ರುತೇನ ।
ಯಮೇವೈಷ ವೃಣುತೇ ತೇನ ಲಭ್ಯ - ಸ್ತಸ್ಯೈಷ ಆತ್ಮಾ ವಿವೃಣುತೇ ತನುಂ ಸ್ವಾಮ್’ ॥೧.೭೭॥

ಪರಮಾತ್ಮ ಪ್ರವಚನಕ್ಕೆ ಅಲಭ್ಯ,
ಸ್ವಾಧ್ಯಾಯ ಬುದ್ಧಿವಂತಿಕೆಗೆ ಅಲಭ್ಯ,
ಶಾಸ್ತ್ರ-ತರ್ಕ-ಸ್ಮರಣಶಕ್ತಿಗೆ ಅಲಭ್ಯ,
ತಾನೇ ಒಲಿದವನಿಗೆ ಮಾತ್ರ ಇವ ಲಭ್ಯ,
ನಿರಹಂಕಾರದ ತನ್ಮಯ ಭಕ್ತಿಗೆ ಒಲಿವ ಸ್ವಾಮಿ,
ಹೃತ್ಕಮಲದಲ್ಲಿ ಒಳಗಣ್ಣಿಗೆ ಕಾಣುವ ಅಂತರ್ಯಾಮಿ.

  
ವಿಷ್ಣುರ್ಹಿ ದಾತಾ ಮೋಕ್ಷಸ್ಯ ವಾಯುಶ್ಚ ತದನುಜ್ಞಯಾ ।
ಮೋಕ್ಷೋ ಜ್ಞಾನಂ ಚ ಕ್ರಮಶೋ ಮುಕ್ತಿಗೋ ಭೋಗ ಏವಚ ॥೧.೭೮॥
ಉತ್ತರೇಷಾಂ ಪ್ರಸಾದೇನ ನೀಚಾನಾಂ ನಾನ್ಯಥಾ ಭವೇತ್ ।
ಸರ್ವೇಷಾಂ ಚ ಹರಿರ್ನಿತ್ಯನಿಯನ್ತಾ ತದ್ವಶಾಃ ಪರೇ ॥೧.೭೯॥

ತಾರತಮ್ಯಂ ತತೋ ಜ್ಞೇಯಂ ಸರ್ವೋಚ್ಚತ್ವಂ ಹರೇಸ್ತಥಾ ।
ಏತದ್ ವಿನಾ ನ ಕಸ್ಯಾಪಿ ವಿಮುಕ್ತಿಃ ಸ್ಯಾತ್ ಕಥಞ್ಚನ ॥೧.೮೦॥

ಎಂದಿಗೂ ಮೋಕ್ಷದಾತನು ಅವನು ನಾರಾಯಣ,
ಅವನಾಜ್ಞೆಯಿಂದ ಮೋಕ್ಷಪ್ರದ-ಮುಖ್ಯಪ್ರಾಣ,
ಮೋಕ್ಷ-ಅದಕ್ಕೆ ಬೇಕಾದ ಜ್ಞಾನ-ಮುಕ್ತಿಯಲ್ಲಿನ ಭೋಗ,
ಬೇಕದಕೆ ಸಾಧನಾಯೋಗ್ಯ ಹಿರಿಯರನುಗ್ರಹದ ಭಾಗ,
ಎಲ್ಲವೂ ಒಂದಕ್ಕೊಂದು ತಾರತಮ್ಯದಿ ಅವಲಂಬಿತ,
ಈ ರೀತಿ ಹಿರಿಯರನುಗ್ರಹ ಆಶೀರ್ವಾದದಿಂದಲೆ ಮೋಕ್ಷ ಪ್ರಾಪ್ತ,
ನಾರಾಯಣನೇ ಎಲ್ಲರ ಅಂತರ್ಯಾಮಿ,
ಅವರವರ "ಸಮ" ಕೊಡುವ ವಿಶ್ವಪ್ರೇಮಿ,
ಹೀಗೆ ತಿಳಿಯಬೇಕಾದ ತಾರತಮ್ಯ ಜ್ಞಾನ,
ಹಾಗೇ ಸಮ-ಮಿಗಿಲಿಲ್ಲದವ ನಾರಾಯಣ.

ಪಞ್ಚಭೇದಾಂಶ್ಚ ವಿಜ್ಞಾಯ ವಿಷ್ಣೋಃ ಸ್ವಾಭೇದಮೇವ ಚ ।
ನಿರ್ದೋಷತ್ವಂ ಗುಣೋದ್ರೇಕಂ ಜ್ಞಾತ್ವಾ ಮುಕ್ತಿರ್ನಚಾನ್ಯಥಾ ॥೧.೮೧॥

ಬಿಡುಗಡೆಗೆ ಆಗಬೇಕು ಪಂಚಭೇದಗಳ ಜ್ಞಾನ,
ಹರಿಯ ಸಮಸ್ತ ರೂಪಗಳ-ಸ್ವರೂಪದ ಅಭೇದ ಜ್ಞಾನ,
ಅವನಿಗೆ ದೋಷಗಳೇ ಇಲ್ಲವೆಂಬ ಸ್ಪಷ್ಟ ಜ್ಞಾನ,
ಅವನು ಸಮಸ್ತ ಗುಣಗಳ ಗಡಣವೆಂಬ ಜ್ಞಾನ,
ಇವೆಲ್ಲಾ ಸಾಕ್ಷಾತ್ಕಾರವಾದಾಗಲೇ ಮುಕ್ತಿಯೆಂಬ ಫಲ,
ಇನ್ಯಾವ ಬೇರೆ ಬೇರೆ ರೀತಿ-ನೀತಿಗಳೆಲ್ಲಾ --ನಿಷ್ಫಲ.

ಅವತಾರಾನ್ ಹರೇರ್ಜ್ಞಾತ್ವಾ ನಾವತಾರಾ ಹರೇಶ್ಚಯೇ ।
ತದಾವೇಶಾಂಸ್ತಥಾ ಸಮ್ಯಗ್ ಜ್ಞಾತ್ವಾ ಮುಕ್ತಿರ್ನಚಾನ್ಯಥಾ ॥೧.೮೨॥

ತಿಳಿಯಬೇಕು ಭಗವಂತನ ಅವತಾರಗಳ ಗುಟ್ಟು,
ಆವೇಶಾವತಾರಗಳಲ್ಲಿನ ವಿಚಿತ್ರ ನಡೆಗಳು ರಟ್ಟು,
ಬರಬೇಕು ಭಗವಂತನ ಗುಣೋದ್ರೇಕದ ಅರಿವು,
ಅವನ ಶಕ್ತಿ-ಅದರ ಅಭಿವ್ಯಕ್ತಿ ಇತ್ಯಾದಿಗಳ ತಿಳಿವು,
ಇದೆಲ್ಲಾ ಆದಾಗಲೇ ಸಾಕ್ಷಾತ್ಕಾರ,
ತೆರೆಯುತ್ತದೆ ಮುಕುತಿಯ ದ್ವಾರ.
[Contributed by Shri Govind Magal]

Saturday 25 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 72 - 75

ಕ್ಷಿತಿಪಾ ಮನುಷ್ಯಗನ್ಧರ್ವಾ ದೈವಾಶ್ಚ ಪಿತರಶ್ಚಿರಾಃ ।
ಆಜಾನಜಾಃ ಕರ್ಮಜಾಶ್ಚ ದೇವಾ ಇನ್ದ್ರಃ ಪುರನ್ದರಃ ॥೧.೭೨॥

ರುದ್ರಃ ಸರಸ್ವತೀ ವಾಯುರ್ಮುಕ್ತಾಃ ಶತಗುಣೋತ್ತರಾಃ ।
ಏಕೋ ಬ್ರಹ್ಮಾ ಚ ವಾಯುಶ್ಚ ವೀನ್ದ್ರೋ ರುದ್ರಸಮಸ್ತಥಾ ।
ಏಕೋ ರುದ್ರಸ್ತಥಾ ಶೇಷೋ ನ ಕಶ್ಚಿದ್ ವಾಯುನಾ ಸಮಃ ॥೧.೭೩॥

ಮುಕ್ತೇಷು ಶ್ರೀಸ್ತಥಾ ವಾಯೋಃ ಸಹಸ್ರಗುಣಿತಾ ಗುಣೈಃ ।
ತತೋsನನ್ತಗುಣೋ ವಿಷ್ಣುರ್ನ ಕಶ್ಚಿತ್ ತತ್ಸಮಃ ಸದಾ’ ॥೧.೭೪॥

ಹೇಳಿದೆಯಿಲ್ಲಿ ತಾರತಮ್ಯ ರೀತಿಯ ವಿವರಣೆ,
ಯೋಗ್ಯತಾನುಸಾರ ಸ್ಥಾನ ಮಾನಗಳ ವಿಶ್ಲೇಷಣೆ,
ಚಕ್ರವರ್ತಿಗಳು-ಮನುಷ್ಯ ಗಂಧರ್ವರು -ದೇವ ಗಂಧರ್ವರು,
ಚಿರಪಿತೃಗಳು-ಆಜಾನಜ ದೇವತೆಗಳು-ಕರ್ಮದಿಂದ ದೇವತೆಗಳಾದವರು,
ಇಂದ್ರ -ರುದ್ರ -ಸರಸ್ವತಿ - (ವಾಯು)ಮುಖ್ಯಪ್ರಾಣ,
ಇವರದು ಮುಕ್ತರಾದಮೇಲೂ ಇದೇ ತಾರತಮ್ಯದ ಗಣ,
ಶಾಸ್ತ್ರದಲ್ಲಿ ಏನೆಲ್ಲಾ ಹೇಳಿದೆ ಚತುರ್ಮುಖನ ಸ್ಥಾನ-ಗುಣ,
ಅವೆಲ್ಲವನ್ನೂ ಹೊಂದೇ ಹೊಂದುತ್ತಾನೆ ಅವ ಮುಖ್ಯಪ್ರಾಣ,
ಬ್ರಹ್ಮ-ಮುಖ್ಯಪ್ರಾಣರದು ಸ್ಥಾನ ಮಾನಗಳಲ್ಲಿ ಒಂದೇ ತ್ರಾಣ,
ಅಂತೆಯೇ ಕೆಳಗೆ ಬರುವ ಗರುಡ ರುದ್ರ ಶೇಷ,
ಒಂದೇ ಸ್ಥಾನ ಮಾನದ ದೇವತೆಗಳು ಎಂಬುದಿಲ್ಲಿ ವಿಶೇಷ,
ದೇವತಾಗಣದಲ್ಲಿ ಮುಖ್ಯಪ್ರಾಣನಿಗೆ ಯಾರಿಲ್ಲ ಸಮ,
ಮುಖ್ಯಪ್ರಾಣನಿಗಿಂತ ಸಾವಿರ ಪಟ್ಟು ಅಧಿಕಳು ರಮ,
ರಮೆಗಿಂತ ಅನಂತ ಪಟ್ಟು ಅಧಿಕ ಹರಿ-ಅವನಿಗೆಂದೂ ಯಾರಿಲ್ಲ ಸಮ.

ಇತ್ಯಾದಿ ವೇದವಾಕ್ಯಂ ವಿಷ್ಣೋರುತ್ಕರ್ಷಮೇವ ವಕ್ತ್ಯುಚ್ಚೈಃ ।
ತಾತ್ಪರ್ಯಂ ಮಹದತ್ರೇತ್ಯುಕ್ತಂ ‘ಯೋ ಮಾಮಿ’ತಿ ಸ್ವಯಂ ತೇನ ॥೧.೭೫॥

ಇವೇ ಮೊದಲಾದ ವೇದ ವಾಕ್ಯ,
ಹೇಳುತ್ತವೆ ನಾರಾಯಣನ ಆಧಿಕ್ಯ,
ಇದನ್ನೇ ಹೇಳುತ್ತದೆ ಮಹಾತಾತ್ಪರ್ಯ,

ಕೃಷ್ಣನೇ ಹೇಳಿದ-ತನಗಿಂತ ಅಧಿಕರಿಲ್ಲೆಂಬ ಆಂತರ್ಯ.
[Contributed by Shri Govind Magal] 

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 66 - 71

ಪ್ರ ಘಾ ನ್ವಸ್ಯ ಮಹತೋ ಮಹಾನಿ ‘ಸತ್ಯಾ ಸತ್ಯಸ್ಯ ಕರಣಾನಿ ವೋಚಮ್’ ।
ಸತ್ಯಮೇನಮನು ವಿಶ್ವೇ ಮದನ್ತಿ ‘ರಾತಿಂ ದೇವಸ್ಯ ಗೃಣತೋ ಮಘೋನಃ’॥೧.೬೬॥

(ಪ್ರ ಘಾ ನ್ವಸ್ಯ ಮಹತೋ..... ಎನ್ನುವ  ಈ ಮಾತು  ಋಗ್ವೇದದ ಎರಡನೇ ಮಂಡಲದ ಹದಿನೈದನೇ ಸೂಕ್ತ (ಗೃತ್ಸಮದ ಮಂಡಲ).)
(ಸತ್ಯಮೇನಮನು... ಎನ್ನುವ ಸಾಲು ಋಗ್ವೇದದಲ್ಲಿ ನಾಲ್ಕನೆಯ ಮಂಡಲದಲ್ಲಿ ಹದಿನೇಳನೆಯ ಸೂಕ್ತದಲ್ಲಿ ಐದನೆಯ ಋಕ್).

ಈ  ನಾರಾಯಣನು ಮಹಾಮಹಿಮ ಸತ್ಯಸ್ಯ ಸತ್ಯ,
ಭಕ್ತಾದಿಗಳ ಸ್ತೋತ್ರವಂದಿತನಾದ ಅವನ ಸೃಷ್ಟಿಯೂ ಸತ್ಯ,
ಇದನ್ನರಿತ ಸಜ್ಜನರಿಗೆ ಲಭ್ಯವಾಗುವ ಫಲವೂ ಸತ್ಯ,
ಇದರಿಂದ ಸ್ಪಷ್ಟವಾಗುತ್ತದೆ ಜಗತ್ತಲ್ಲವೇ ಅಲ್ಲ ಮಿಥ್ಯ.

ಯಚ್ಚಿಕೇತ ಸತ್ಯಮಿತ್ ತನ್ನ ಮೋಘಂ ‘ವಸು ಸ್ಪಾರ್ಹಮುತ ಜೇತೋತ ದಾತಾ।
ಸತ್ಯಃ ಸೋ ಅಸ್ಯ ಮಹಿಮಾ ಗೃಣೇ ‘ಶವೋ ಯಜ್ಞೇಷು ವಿಪ್ರರಾಜ್ಯೇ’ ॥೧.೬೭॥

(ಯಚ್ಚಿಕೇತ ಸತ್ಯಮಿತ್ ......ಇದು ಋಗ್ವೇದದ ಹತ್ತನೇ ಮಂಡಲದ ೫೫ನೆಯ ಸೂಕ್ತ, ೬ನೆಯ ಋಕ್.)
(ಸತ್ಯಃ ಸೋ ಅಸ್ಯ ಮಹಿಮಾ .....ಋಗ್ವೇದದ ಮೂರನೇ ಮಂಡಲ ೩ನೆಯ ಸೂಕ್ತ ೪ನೆಯ ಋಕ್.)

ಪರಮಾತ್ಮನ ಸೃಷ್ಟಿಯೆಲ್ಲವೂ ಪರಮಸತ್ಯ,
ಅದು ಮಿಥ್ಯವಲ್ಲವಾದ್ದರಿಂದ ಹೇಗಾಗುತ್ತದೆ ವ್ಯರ್ಥ?
ಮೂಲೋಕದ ಸಂಪತ್ತನ್ನು ಬಲಿಯಿಂದ ದಾನ ಪಡೆದದ್ದು ಸತ್ಯ,
ವಾಮನನಾಗಿ ಬಲಿಯ ಗೆದ್ದು ಅದನ್ನು ಪುರಂದರಗಿತ್ತಿದ್ದೂ ಸತ್ಯ,
ಯಜ್ಞಗಳಲ್ಲಿ ಬ್ರಾಹ್ಮಣರು ಹೇಳುವುದು ಭಗವಂತನ ಮಹಿಮೆ,
ಸರ್ವರೀತಿಯಿಂದಲೂ ಸ್ಥಾಪಿತವಾಗಿದೆ ಸತ್ಯಸಂಕಲ್ಪನ ಹಿರಿಮೆ.

ಸತ್ಯಾ ವಿಷ್ಣೋರ್ಗುಣಾಃ ಸರ್ವೇ ಸತ್ಯಾ ಜೀವೇಶಯೋರ್ಭಿದಾ ।
ಸತ್ಯೋ ಮಿಥೋ ಜೀವಭೇದಃ ಸತ್ಯಂ ಚ ಜಗದೀದೃಶಮ್ ॥೧.೬೮॥

ಭಗವಂತನ ಗುಣಗಳಾಗಿವೆ ಸತ್ಯ,
ಜೀವ ಈಶ್ವರರ ಭೇದವು ನಿತ್ಯ,
ಜೀವರ ಪರಸ್ಪರ ಭೇದವೂ ನಿತ್ಯ,
ಪಂಚಭೂತಗಳಿಂದಾದ ಜಗತ್ತು ಸತ್ಯ.

 ಅಸತ್ಯಃ ಸ್ವಗತೋ ಭೇದೋ ವಿಷ್ಣೋರ್ನಾನ್ಯದಸತ್ಯಕಮ್ ।
ಜಗತ್ ಪ್ರವಾಹಃ ಸತ್ಯೋsಯಂ ಪಞ್ಚಭೇದಸಮನ್ವಿತಃ ॥೧.೬೯॥

ಜೀವೇಶಯೋರ್ಭಿದಾ ಚೈವ ಜೀವಭೇದಃ ಪರಸ್ಪರಮ್ ।
ಜಡೇಶಯೋರ್ಜಡಾನಾಂ ಚ ಜಡಜೀವಭಿದಾ ತಥಾ ॥೧.೭೦॥

ಪಞ್ಚಭೇದಾ ಇಮೇ ನಿತ್ಯಾಃ ಸರ್ವಾವಸ್ಥಾಸು ಸರ್ವಶಃ ।
ಮುಕ್ತಾನಾಂ ಚ ನ ಹೀಯನ್ತೇ ತಾರತಮ್ಯಂ ಚ ಸರ್ವದಾ ॥೧.೭೧॥

ನಾರಾಯಣನ ರೂಪಗಳಲ್ಲಿರುವ ಭೇದವು ಅಲ್ಲ ಸತ್ಯ,
ಉಳಿದ ಯಾವುದೂ ಮಿಥ್ಯವಲ್ಲ ಸರ್ವವೂ ಸತ್ಯ,
ಪಂಚ ಭೇದಗಳಿಂದ ಕೂಡಿದ ಜಗತ್ತು,
ಸತ್ಯವೇ ಅದು-ಅಂಗೈಯಲ್ಲಿರುವಂತೆ ಮುತ್ತು .

ಜೀವಾತ್ಮ ಪರಮಾತ್ಮರಲ್ಲಿದೆ ಭೇದ,
ಪರಸ್ಪರ ಜೀವರಲ್ಲಿದೆ ಭೇದ,
ಜಡ ಪರಮಾತ್ಮನಲ್ಲಿದೆ ಭೇದ,
ಜಡ ಜಡಗಳಲ್ಲಿದೆ ಭೇದ,
ಜಡ ಜೀವರಲ್ಲಿದೆ ಭೇದ,
ಈ ಪಂಚ ಭೇದಗಳವು ಎಂದೆಂದೂ ನಿತ್ಯ,
ಕಾಲಮಿತಿಯಿರದ ಅನಾದಿ ಅನಂತ ನಿತ್ಯ,

ಮುಕ್ತರಲ್ಲೂ ಪಂಚ ಭೇದ ತಾರತಮ್ಯ ನಿತ್ಯ.
[Contributed by Shri Govind Magal] 

Friday 24 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 61 - 65

ಅಸ್ಯ ದೇವಸ್ಯ ಮೀಳ್ಢುಷೋ ವಯಾ ‘ವಿಷ್ಣೋರೇಷಸ್ಯ ಪ್ರಭೃಥೇ ಹವಿರ್ಭಿಃ ।
ವಿದೇ ಹಿ ರುದ್ರೋ ರುದ್ರೀಯಂ ಮಹಿತ್ವಂ ‘ಯಾಸಿಷ್ಟಂ ವರ್ತಿರಶ್ವಿನಾವಿರಾವತ್’ ॥೧.೬೧॥

(ಇದು ಋಗ್ವೇದದ ೭ನೇ ಮಂಡಲದ ೪೭ನೆಯ ಸೂಕ್ತದ ಐದನೆಯ ಋಕ್).

ಬೇಡಿದ್ದನ್ನು ನೀಡುವ ಎಲ್ಲರಂತರ್ಯಾಮಿ,
ಎಲ್ಲರ ಇಷ್ಟದೈವ ಅವ ನಾರಾಯಣ ಸ್ವಾಮಿ,
ಅವನನ್ನು ಹವಿಸ್ಸಿನೊಡಗೂಡಿ ಪೂಜಿಸಿದ ರುದ್ರ,
ಹರಿ ಅನುಗ್ರಹದಿಂದ ಅವನ ಪದವಿಯಾಯ್ತು ಭದ್ರ,
ಅಶ್ವಿದೇವತೆಗಳೂ ಅದನ್ನೇ ಅನುಸರಿಸಿದರು,
ಅನುಗುಣವಾದ ಸ್ಥಾನ ಮಾನ ಪಡೆದರು .

ಸ್ತುಹಿ ಶ್ರುತಂ ಗರ್ತಸದಂ ಯುವಾನಂ ‘ಮೃಗಂ ನ ಭೀಮಮುಪಹತ್ನುಮುಗ್ರಮ್’ ।
ಯಂ ಕಾಮಯೇ ತನ್ತಮುಗ್ರಂ ಕೃಣೋಮಿ ‘ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಮ್’ ॥೧.೬೨॥

(ಸ್ತುಹಿ ಶ್ರುತಂ ಗರ್ತಸದಂ ...ಎನ್ನುವುದು ಋಗ್ವೇದದ ಎರಡನೇ ಮಂಡಲದ, ೩೩ನೆಯ ಸೂಕ್ತದ, ೧೧ನೆಯ ಋಕ್).

ಇದು ರುದ್ರಾಂತರ್ಯಾಮಿ ನೃಸಿಂಹನ ಸ್ತೋತ್ರ ಮಂತ್ರ,
ಅಂತಹ ನೃಸಿಂಹನ ಭಜಿಸು ಎಂದು ರುದ್ರ ಹೇಳಿಕೊಂಡ ತಂತ್ರ,
ವೇದವೇದ್ಯ ಚಿರಯುವಕ ರುದ್ರಾಂತರ್ಯಾಮಿ,
ಪ್ರಳಯಕಾಲದಿ ಎಲ್ಲ ಸಂಹರಿಪ ಸಿಂಹಮುಖದ ಸ್ವಾಮಿ,
ಅವನನ್ನೇ ಭಜಿಸು ಎಂದು ರುದ್ರದೇವರ ಸ್ವಗತ,
ಶಿವನ ಭಕ್ತಿ ಶಕ್ತಿ -ಹರಿಸರ್ವೋತ್ತಮತ್ವ ಸ್ಥಾಪಿತ.

(ಯಂ ಕಾಮಯೇ... ಎನ್ನುವುದು ಅಂಭೃಣೀ ಸೂಕ್ತ(೫). ಋಗ್ವೇದದಲ್ಲಿ ಹತ್ತನೇ ಮಂಡಲ, ೧೨೫ನೆಯ ಸೂಕ್ತ, ೫ನೆಯ ಋಕ್. ಅಥರ್ವವೇದದಲ್ಲಿ ನಾಲ್ಕನೆಯ ಕಾಂಡ, ೩೦ನೆಯ ಸೂಕ್ತ, ೩ನೆಯ ಋಕ್).

ಮಾತೆ ಲಕ್ಷ್ಮೀದೇವಿ ಹೇಳಿಕೊಳ್ಳುತ್ತಾಳಾಕೆ,
ನಾನೇನು ಬಯಸುತ್ತೇನೋ ಹಾಗೇ ಮಾಡುವಾಕೆ,
ಬಯಸಿದವನನ್ನು ರುದ್ರನನ್ನಾಗಿ ಮಾಡುತ್ತೇನೆ,
ಬಯಸಿದವನನ್ನು ಬ್ರಹ್ಮನನ್ನಾಗಿ ಮಾಡುತ್ತೇನೆ,
ಬಯಸಿದವನನ್ನು ಋಷಿಯನ್ನಾಗಿ ಮಾಡುತ್ತೇನೆ,
ಬಯಸಿದವನನ್ನು ಜ್ಞಾನಿಯನ್ನಾಗಿ ಮಾಡುತ್ತೇನೆ,
ಇದರಿಂದ ಸ್ಪಷ್ಟ -ನಡೆಯುತ್ತದೆ ಅವಳ ಇಷ್ಟ,
ಬ್ರಹ್ಮ ರುದ್ರಾದಿ ಸಮಸ್ತ ಜೀವರಿಗಿಂತ ಅವಳು ಶ್ರೇಷ್ಠ.

ಏಕೋ ನಾರಾಯಣ ಆಸೀನ್ನ ಬ್ರಹ್ಮಾ ನಚ ಶಙ್ಕರಃ’ ।
ವಾಸುದೇವೋ ವಾ ಇದಮಗ್ರ ಆಸೀನ್ನ ಬ್ರಹ್ಮಾ ನಚ ಶಙ್ಕರಃ’ ॥೧.೬೩॥

ಇದು ಒಂದು ವೇದವಾಕ್ಯದ ಹೂರಣ,
ಒಬ್ಬನೇ ಒಬ್ಬನಿದ್ದನವ ನಾರಾಯಣ,
ಆಗಿರಲಿಲ್ಲ ಬ್ರಹ್ಮ ರುದ್ರರ ಅನಾವರಣ,
ಇನ್ನೊಂದು ವೇದವಾಣಿಯ ಸ್ಪಷ್ಟ ಭಾವ,
ಆದಿಯಲ್ಲಿ ಮೊದಲಿದ್ದವ ವಾಸುದೇವ,
ಬ್ರಹ್ಮ ರುದ್ರರು ಇರಲಿಲ್ಲ ಎಂಬ ಭಾವ.

ಯದಾ ಪಶ್ಯಃ ಪಶ್ಯತೇ ರುಗ್ಮವರ್ಣಂ ‘ಕರ್ತಾರಮೀಶಂ ಪುರುಷಂ ಬ್ರಹ್ಮಯೋನಿಮ್ ।
ತದಾ ವಿದ್ವಾನ್ ಪುಣ್ಯಪಾಪೇ ವಿಧೂಯ ‘ನಿರಞ್ಜನಃ ಪರಮಂ ಸಾಮ್ಯಮುಪೈತಿ’ ॥೧.೬೪॥

ಅಥರ್ವಣ ಉಪನಿಷತ್ತು ಹೇಳುವ ಮಾತು,
ಜ್ಞಾನಿಗಾಗುವ ಭಗವದ್ದರ್ಶನದ ಕುರಿತು,
ಸ್ವರ್ಣ ವರ್ಣ ಈ ಜಗದ ನೃಪ,
ಅಂತರ್ಯಾಮಿ ಸಮರ್ಥ ಭೂಪ,
ಜ್ಞಾನಿಗೆಂದಾಗುವುದೋ ವೇದವೇದ್ಯನ ದರ್ಶನ,
ಆಗುವುದವನಿಗೆ ಅನಿಷ್ಟ ಪುಣ್ಯ ಪಾಪದ ನಾಶನ,
ಹೀಗೆ ಸಾಕ್ಷಾತ್ಕಾರವಾಗಲು ಪರಬ್ರಹ್ಮ,
ದೊರೆವುದವನಿಗೆ ಭಗವಂತನ ಸಾಮ್ಯ .

ಯೋ ವೇದ ನಿಹಿತಂ ಗುಹಾಯಾಂ ಪರಮೇ ವ್ಯೋಮನ್।
ಸೋsಶ್ನುತೇ ಸರ್ವಾನ್ ಕಾಮಾನ್ ಸಹ ಬ್ರಹ್ಮಣಾ ವಿಪಶ್ಚಿತಾ’ ॥೧.೬೫॥

ಇದು ತೈತ್ತಿರೀಯ ಉಪನಿಷತ್ತಿನ ಸ್ಪಷ್ಟ ಉಲ್ಲೇಖ,
ಯಾರ ಒಳಗಣ್ಣಿಗೆ ಕಾಣುವನೋ ಹೃತ್ಕಮಲದ ಆತ್ಮಸಖ,
ಮುಕ್ತನಾಗಿ ಪಡೆಯುವನು ಪರಬ್ರಹ್ಮನ ಸಖ್ಯ,

ಲಭ್ಯವವನಿಗೆ ತಾರತಮ್ಯೋಕ್ತ ಸಕಲ ಸೌಖ್ಯ.
[Contributed by Shri Govind Magal]