Tuesday 12 December 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 07 - 10

ದೇಶೇದೇಶೇ ತಥಾ ಗ್ರನ್ಥಾನ್ ದೃಷ್ಟ್ವಾ ಚೈವ ಪೃಥಗ್ವಿಧಾನ್ ।
ಯಥಾ ಸ ಭಗವಾನ್ ವ್ಯಾಸಃ ಸಾಕ್ಷಾನ್ನಾರಾಯಣಃ ಪ್ರಭುಃ ॥೨.೦೭॥
ಜಗಾದ ಭಾರತಾದ್ಯೇಷು ತಥಾ ವಕ್ಷ್ಯೇ ತದೀಕ್ಷಯಾ ।
ಸಙ್ಕ್ಷೇಪಾತ್ ಸರ್ವಶಾಸ್ತ್ರಾರ್ಥಂ ಭಾರತಾರ್ಥಾನುಸಾರತಃ  
ನಿರ್ಣಯಃ ಸರ್ವಶಾಸ್ತ್ರಾಣಾಂ ಭಾರತಂ ಪರಿಕೀರ್ತಿತಮ್  ॥೨.೦೮॥

ಕೈಗೊಂಡು ಬೇರೆ ಬೇರೆ ದೇಶಗಳ ಪ್ರವಾಸ,
ಸಂಗ್ರಹಿಸಿ ಮಾಡಿಕೊಂಡ ವಿಷಯಗಳ ನ್ಯಾಸ,
ಮೇಲಿನದು ನಾವು ಅನುಸರಿಸುವ ರೀತಿ,
ಆಚಾರ್ಯರು ಮಾಡಿದ್ದು ಕೆಳಗೆ ಹೇಳಿದ ನೀತಿ,
ಅನುಸರಿಸಿ ವೇದವ್ಯಾಸರನುಗ್ರಹ - ಬ್ರಹ್ಮಸೂತ್ರ,
ಹೇಳ ಹೊರಟಿದ್ದೇನೆ -ಮಹಾಭಾರತದ ಶಾಸ್ತ್ರ,
ಇದು ಕೇವಲ ಮಹಾಭಾರತದ್ದಷ್ಟೇ ಅಲ್ಲ,
ಅನುಸರಿಸಿ ಹೇಳುತ್ತಿರುವ ಸರ್ವಶಾಸ್ತ್ರದ ಬೆಲ್ಲ.

ಸರ್ವಶಾಸ್ತ್ರಗಳ ನಿರ್ಣಯ ಅದೇ ಏಕೆ ಮಹಾಭಾರತ?

ಹೇಗೆಂದು ಆಚಾರ್ಯರ ವಿವರಣೆ ಹೊರಡುತ್ತದೆ ವಿಸ್ತೃತ,

ಭಾರತಂ ಸರ್ವವೇದಾಶ್ಚ ತುಲಾಮಾರೋಪಿತಾಃ ಪುರಾ 
ದೇವೈರ್ಬ್ರಹ್ಮಾದಿಭಿಃ ಸರ್ವೈರ್ ಋಷಿಭಿಶ್ಚ ಸಮನ್ವಿತೈಃ 
ವ್ಯಾಸಸ್ಯೈವಾsಜ್ಞಯಾ ತತ್ರ ತ್ವತ್ಯರಿಚ್ಯತ ಭಾರತಮ್   ॥೨.೦೯॥

ಭಗವಾನ್ ವೇದವ್ಯಾಸರ ಆಜ್ಞಾನುಸಾರ,
ಬ್ರಹ್ಮಾದಿಗಳು ಮಥಿಸಿದರು ಶಾಸ್ತ್ರಗಳ ಸಾರ,
ನಡೆಸಿದರು ಮಹಾಭಾರತ -ವೇದಗಳ ಅಧ್ಯಯನ,
ಆಯಿತಲ್ಲಿ ಮಹಾಭಾರತವೇ ಮಿಗಿಲೆಂಬ ತೀರ್ಮಾನ,
ತೂಕದಲ್ಲಿ ಮಹಾಭಾರತವೇ ಆಯಿತಂತೆ ಭಾರ,
ಜ್ಞಾನತುಲನೆಯಲ್ಲಿ ಮಹಾಭಾರತ ಶ್ರೇಷ್ಠವೆಂಬ ಸಾರ.

ಮಹತ್ತ್ವಾದ್ ಭಾರವತ್ತ್ವಾಚ್ಚ ಮಹಾಭಾರತಮುಚ್ಯತೇ ।
ನಿರುಕ್ತಮಸ್ಯ  ಯೋ ವೇದ ಸರ್ವಪಾಪೈಃ ಪ್ರಮುಚ್ಯತೇ ॥೨.೧೦॥

ಮಹತ್ವದಿಂದಲೂ ಆಗಿದೆ ಭಾರ,
ಭಗವತ್ ಪ್ರತಿಪಾದನೆಯ ಸಾರ,
ಪ್ರತಿ ಶ್ಲೋಕಕ್ಕೂ ಕಡಿಮೆಯೆಂದರೆ ಹತ್ತರ್ಥ,
ಎಲ್ಲವೂ ಹೇಳುವುದು ಮಥಿಸಿದ ಶಾಸ್ತ್ರಾರ್ಥ,
ಈ ಎಲ್ಲಾ ಕಾರಣಗಳಿಂದ ಇದು ಮಹಾ-ಭಾರತ,
ನಿಜವಾಗಿ ತಿಳಿದವನಾಗುತ್ತಾನೆ ಪಾಪಗಳಿಂದ ಮುಕ್ತ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula