ಭಾವ ಸ್ಪಂದನ by “ತ್ರಿವೇಣಿ ತನಯ”
ಸ್ವಗತ
ಮನ ನಾಲಿಗೆ ತಪ್ಪಿದರೆ ಸ್ತಿಮಿತ,
ಆಗಬಹುದು ನೋವಿನ ಅನಾಹುತ,
ಹಿಡಿತ ಕೊಡು ಮನ ನಾಲಿಗೆ ಮೇಲೆ,
ಹಿತ ನೀಡುತಿರಲಿ ನೀನಾಡಿಸೋ ಲೀಲೆ.
ಕಾಣದ ಕರ್ಮ -ಜೀವನದ ಮರ್ಮ
ಪಾಪ ಪುಣ್ಯಗಳೂ ಕಣ್ಣಿಗೆ ಕಾಣುವುದಿಲ್ಲ,
ನಿತ್ಯಾನುಭವಗಳೂ ಕಣ್ಣಿಗೆ ಕಾಣುವುದಿಲ್ಲ,
ಅನುಭವಿಸಲೇ ಬೇಕು ಇದ್ದಂತೆ ಕರ್ಮ,
ಕಾಣದಿರುವುದೇ ಹೆಚ್ಚು ಜೀವನದ ಮರ್ಮ.
ಜೀವನದ ಒಡಲು -ಸಮ್ಮಿಶ್ರ ಕಡಲು
ಸಾಧ್ಯವಾದರೆ ನಗುತ ಪ್ರೀತಿಯ ಹಂಚು,
ಆಗದಿರು ಯಾರಿಗೂ ಬಾಣಲೆ ಹೆಂಚು,
ಏನಿದೆ ನಿನದೆಂದು ಇತರರಿಗೆ ಕೊಡಲು,
ಎಲ್ಲವೂ ಅವನಿತ್ತ ಸಮ್ಮಿಶ್ರ ಕಡಲು.
ವಂದನೀಯ -ನಿಂದನೀಯ
ಉದಾತ್ತ ವ್ಯಕ್ತಿಗಳು ಗುಣಗಳ ಗಡಣ,
ಮೂರ್ಖರ ಆಸ್ತಿಯದು ಬರೀ ದುರ್ಗುಣ,
ಒಬ್ಬನಾದರೂ ಸಜ್ಜನ ವಂದನೀಯ,
ಮೂರ್ಖರು ಸಾವಿರಿದ್ದರೂ ಹೇಯ.
ನಗೆಯ ಮಿಂಚು -ಜ್ಞಾನ ಹಂಚು
ಸ್ನೇಹ ಪ್ರೀತಿ ಜ್ಞಾನ ಹಂಚು,
ಆಗುವುದದು ಖಚಿತ ಹೆಚ್ಚು,
ಮುಚ್ಚಿಟ್ಟ ಸುಜ್ಞಾನದ ಪಾಲು,
ನಾಯಿ ಮೊಲೆಯಲ್ಲಿನ ಹಾಲು.
[Contributed by Shri Govind Magal]
ಸ್ವಗತ
ಮನ ನಾಲಿಗೆ ತಪ್ಪಿದರೆ ಸ್ತಿಮಿತ,
ಆಗಬಹುದು ನೋವಿನ ಅನಾಹುತ,
ಹಿಡಿತ ಕೊಡು ಮನ ನಾಲಿಗೆ ಮೇಲೆ,
ಹಿತ ನೀಡುತಿರಲಿ ನೀನಾಡಿಸೋ ಲೀಲೆ.
ಕಾಣದ ಕರ್ಮ -ಜೀವನದ ಮರ್ಮ
ಪಾಪ ಪುಣ್ಯಗಳೂ ಕಣ್ಣಿಗೆ ಕಾಣುವುದಿಲ್ಲ,
ನಿತ್ಯಾನುಭವಗಳೂ ಕಣ್ಣಿಗೆ ಕಾಣುವುದಿಲ್ಲ,
ಅನುಭವಿಸಲೇ ಬೇಕು ಇದ್ದಂತೆ ಕರ್ಮ,
ಕಾಣದಿರುವುದೇ ಹೆಚ್ಚು ಜೀವನದ ಮರ್ಮ.
ಜೀವನದ ಒಡಲು -ಸಮ್ಮಿಶ್ರ ಕಡಲು
ಸಾಧ್ಯವಾದರೆ ನಗುತ ಪ್ರೀತಿಯ ಹಂಚು,
ಆಗದಿರು ಯಾರಿಗೂ ಬಾಣಲೆ ಹೆಂಚು,
ಏನಿದೆ ನಿನದೆಂದು ಇತರರಿಗೆ ಕೊಡಲು,
ಎಲ್ಲವೂ ಅವನಿತ್ತ ಸಮ್ಮಿಶ್ರ ಕಡಲು.
ವಂದನೀಯ -ನಿಂದನೀಯ
ಉದಾತ್ತ ವ್ಯಕ್ತಿಗಳು ಗುಣಗಳ ಗಡಣ,
ಮೂರ್ಖರ ಆಸ್ತಿಯದು ಬರೀ ದುರ್ಗುಣ,
ಒಬ್ಬನಾದರೂ ಸಜ್ಜನ ವಂದನೀಯ,
ಮೂರ್ಖರು ಸಾವಿರಿದ್ದರೂ ಹೇಯ.
ನಗೆಯ ಮಿಂಚು -ಜ್ಞಾನ ಹಂಚು
ಸ್ನೇಹ ಪ್ರೀತಿ ಜ್ಞಾನ ಹಂಚು,
ಆಗುವುದದು ಖಚಿತ ಹೆಚ್ಚು,
ಮುಚ್ಚಿಟ್ಟ ಸುಜ್ಞಾನದ ಪಾಲು,
ನಾಯಿ ಮೊಲೆಯಲ್ಲಿನ ಹಾಲು.
[Contributed by Shri Govind Magal]
No comments:
Post a Comment
ಗೋ-ಕುಲ Go-Kula