Wednesday 11 October 2017

Bhava Spandana - 24

ಭಾವ ಸ್ಪಂದನ by “ತ್ರಿವೇಣಿ ತನಯ

ಸ್ವಗತ

ಮನ ನಾಲಿಗೆ ತಪ್ಪಿದರೆ ಸ್ತಿಮಿತ,
ಆಗಬಹುದು ನೋವಿನ ಅನಾಹುತ,
ಹಿಡಿತ ಕೊಡು ಮನ ನಾಲಿಗೆ ಮೇಲೆ,
ಹಿತ ನೀಡುತಿರಲಿ ನೀನಾಡಿಸೋ ಲೀಲೆ.

ಕಾಣದ ಕರ್ಮ -ಜೀವನದ ಮರ್ಮ

ಪಾಪ ಪುಣ್ಯಗಳೂ ಕಣ್ಣಿಗೆ ಕಾಣುವುದಿಲ್ಲ,
ನಿತ್ಯಾನುಭವಗಳೂ ಕಣ್ಣಿಗೆ ಕಾಣುವುದಿಲ್ಲ,
ಅನುಭವಿಸಲೇ ಬೇಕು ಇದ್ದಂತೆ ಕರ್ಮ,
ಕಾಣದಿರುವುದೇ ಹೆಚ್ಚು ಜೀವನದ ಮರ್ಮ.

ಜೀವನದ ಒಡಲು -ಸಮ್ಮಿಶ್ರ ಕಡಲು

ಸಾಧ್ಯವಾದರೆ ನಗುತ ಪ್ರೀತಿಯ ಹಂಚು,
ಆಗದಿರು ಯಾರಿಗೂ ಬಾಣಲೆ ಹೆಂಚು,
ಏನಿದೆ ನಿನದೆಂದು ಇತರರಿಗೆ ಕೊಡಲು,
ಎಲ್ಲವೂ ಅವನಿತ್ತ ಸಮ್ಮಿಶ್ರ ಕಡಲು.

ವಂದನೀಯ -ನಿಂದನೀಯ

ಉದಾತ್ತ ವ್ಯಕ್ತಿಗಳು ಗುಣಗಳ ಗಡಣ,
ಮೂರ್ಖರ ಆಸ್ತಿಯದು ಬರೀ ದುರ್ಗುಣ,
ಒಬ್ಬನಾದರೂ ಸಜ್ಜನ ವಂದನೀಯ,
ಮೂರ್ಖರು ಸಾವಿರಿದ್ದರೂ ಹೇಯ.

ನಗೆಯ ಮಿಂಚು -ಜ್ಞಾನ ಹಂಚು

ಸ್ನೇಹ ಪ್ರೀತಿ ಜ್ಞಾನ ಹಂಚು,
ಆಗುವುದದು ಖಚಿತ ಹೆಚ್ಚು,
ಮುಚ್ಚಿಟ್ಟ ಸುಜ್ಞಾನದ ಪಾಲು,
ನಾಯಿ ಮೊಲೆಯಲ್ಲಿನ ಹಾಲು.
[Contributed by Shri Govind Magal]

No comments:

Post a Comment

ಗೋ-ಕುಲ Go-Kula