Sunday 8 October 2017

Bhava Spandana - 23

ನಿನ್ನೊಳಗೇ ನೀ ಮಾಣು-ಮನಗಾಣು .

ಕಾಣೋದೆಲ್ಲಾ ಸತ್ಯವಲ್ಲ ,
ಕಾಣದ್ದು ಎಲ್ಲಾ ಅಸತ್ಯವಲ್ಲ ,
ಕಾಣುವುದು ಕಣ್ಣಲ್ಲ ಒಳಮನಸು ,
ಅವಧೂತರಿತ್ತ ಅಧ್ಯಾತ್ಮ ತಿನಿಸು .

ಭಾವ ಸ್ಪಂದನ by “ತ್ರಿವೇಣಿ ತನಯ

ಮನದಾಲಯ -ಆಗಲಿ ಅಜ್ಞಾನದ ಲಯ

ಎಲ್ಲೇ ಸುತ್ತು ಕಾಡು ಮೇಡು ಹಿಮಾಲಯ,
ಎಷ್ಟೇ ಇರಲಿ ನೋಡಿ ಅರ್ಚಿಸಿದ ದೇವಾಲಯ,
ಅಜ್ಞಾನದ ಹಿಮವದು ಆಗಬೇಕು ಲಯ,
ಅನುಭವವಾಗಬೇಕು ಎದೆಯ ದೇವಾಲಯ.

ಬೇಡ ಸೊಕ್ಕು -ಸಜ್ಜನರಲಿ ಮನವಿಕ್ಕು

ಭಗವಂತನಿರುವುದು ಎಲ್ಲದರಲಿ ಹಾಸುಹೊಕ್ಕು,
ಆಗದಿರು ಮೆತ್ತಗೆ ಕಣ್ಮುಚ್ಚಿ ಹಾಲಕುಡಿವ ಬೆಕ್ಕು,
ದೂರಾಗಲಿ ಪೊಳ್ಳು ಅಹಂಕಾರದ ಸುಳ್ಳು ಸೊಕ್ಕು,
ನಿಜ ಜ್ಞಾನ ಸಜ್ಜನರ ಪಾದಗಳಲಿ ಮನವಿಕ್ಕು.

ಗುದ್ದು -ಸದ್ದು -ಮದ್ದು

ಭಗವಂತನ ಗುದ್ದು ಆಗುವುದಿಲ್ಲ ಸದ್ದು ,
ತಿಳಿದು ತಿದ್ದಿಕೊಳ್ಳುವವರಿಗೆ ಅದೇ ಮದ್ದು,
ಅರಿವಾಗದಿರೆ ಜೀವನದಾಟವೇ ರದ್ದು,
ಸ್ವಭಾವಕ್ಕೆ ತಕ್ಕ ಬದುಕು -ಬೇಡ ಜಿದ್ದು .

ಹೆಣ್ಣಾದರೇನು -ಗಂಡಾದರೇನು?

ಭಗವಂತನರ್ಚಿಸಲು ಹೆಣ್ಣಾದರೇನು ಗಂಡಾದರೇನು?
ಎದೆಯೊಳು ತುಂಬಿರಲು ಪ್ರಾಮಾಣಿಕ ಭಕ್ತಿಯ ಜೇನು,
ದುಂಬಿಯಾಗಿ ಬಂದು ಹೀರುವ ಭಕ್ತವತ್ಸಲ ತಾನು,
ಶಬರಿ ಅಹಲ್ಯೆ ಮುಂತಾದವರ ಉದ್ಧರಿಸಿಲ್ಲವೇನು?
[Contributed by Shri Govind Magal]

No comments:

Post a Comment

ಗೋ-ಕುಲ Go-Kula