Sunday 1 October 2017

Bhava Spandana - 20

ಭಾವ ಸ್ಪಂದನ by “ತ್ರಿವೇಣಿ ತನಯ

ಎಚ್ಚರದ ನಡೆ

ಕಂಡ ಕಂಡಲ್ಲಿ ಕೈ ಚಾಚ ಬೇಡ,
ಕಂಡದ್ದೆಲ್ಲಾ ಎತ್ತಿ ಬಾಚ ಬೇಡ,
ದುಡಿದುಕೋ ಎರಡ್ಹೊತ್ತಿನ ಅನ್ನ,
ಪಡೆದುಕೋ ಸಿಕ್ಕಲ್ಲೆಲ್ಲಾ ತತ್ವಜ್ಞಾನ.

ಬಂಧು -ಬಳಗ

ಕೈ ಬಿಟ್ಟವರಿಗಾಗಿ ಕೊರಗಬೇಡ,
ಕೈ ಹಿಡಿದವರನೆಂದೂ ತೊರೆಯಬೇಡ,
ಹಿಡಿಯಲು ತೊರೆಯಲು ಎಷ್ಟರದು ಜೀವ?
ಪಡೆದು ಬಂದದ್ದನ್ನೇ ಭಗವಂತ ಕರುಣಿಸುವ.

ಬಿಚ್ಚಿಕೋ -ನೆಚ್ಚಿ ಕಚ್ಚಿಕೋ

ಮುಚ್ಚಿಡುವುದೇ ಬಿಚ್ಚುವುದಕ್ಕಾಗಿ,
ಬಿಚ್ಚದಿದ್ದರೆ ಮುಚ್ಚಿಡುವುದ್ಯಾತಕ್ಕಾಗಿ?
ತೆರೆದುಕೋ ನಿನ್ನ ನೀನು -ಬಿಚ್ಚಿಕೋ,
ತಕ್ಕಂಥ ಸ್ವಭಾವ ಕಂಡು -ಕಚ್ಚಿಕೋ.

ಪ್ರಭಾವದ ಶಕ್ತಿ-ಸ್ವಭಾವದಿಂದ ಮುಕ್ತಿ

ಮೀರಲೆತ್ನಿಸು ಪ್ರಭಾವ,
ಪ್ರಕಟವಾಗಲಿ ಸ್ವಭಾವ,
ಸ್ವಭಾವ ವಿಕಾಸವೇ ಮುಕ್ತಿ,
ಪ್ರಭಾವ ಅದ ಮುಚ್ಚುವ ದುಶ್ಯಕ್ತಿ.

ಭಯ - ಅಭಯ

ಉಳುವ ಯೋಗಿಗೆ ಬಡತನವಿಲ್ಲ,
ಭಗವದ್ಧ್ಯಾನಿಗೆ ಎಂದೂ ನೋವಿಲ್ಲ,
ಜಗಳ ದೂರವಿಡುವುದು -ಮೌನ,
ಭಯ ದೂರವಿಡುವುದು -ಜ್ಞಾನ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula