Tuesday 10 May 2016

Sāra Saṅgama 30

ಸಾರ ಸಂಗಮ  by “ತ್ರಿವೇಣಿ ತನಯ

ಶಿಸ್ತು -ಅಶಿಸ್ತು

ನಿತ್ಯ ನೋಡುವೆವು ಸೂರ್ಯೋದಯ ಸೂರ್ಯಾಸ್ತ,
ಶಿಸ್ತಿನ ಪ್ರಕೃತಿಯೊಂದಿಗಿದ್ದರೂ ಬದುಕು ಅಸ್ತವ್ಯಸ್ತ,
ಬೃಹತ್ ಪ್ರಕೃತಿಯ ಓಟದಲ್ಲಿ ನೀನೊಂದು ಕಣ,
ಅರಿತು ತೀರಿಸಲೆತ್ನಿಸು ನಿನ್ನ ಪ್ರತಿಯೊಂದು ಋಣ.

ನಮಾಮಿ -ಅಂತರ್ಯಾಮಿ

ನಿತ್ಯ ಜೀವನದಲಿ ಪ್ರತಿಯೊಬ್ಬರನೂ ಗೌರವಿಸು,
ಒಳಗಿದ್ದು ಚೈತನ್ಯವೀವ ಅಂತರ್ಯಾಮಿಗೆ ನಮಿಸು,
ಸಾಲಿಗ್ರಾಮ ಮೂರ್ತಿಗಳಿಗಾಗದಿರಲಿ ಪೂಜೆ ಸೀಮಿತ,
ಎಲ್ಲರಲ್ಲಿರುವ ಶಕ್ತಿಗೆ ಬಾಗಿ ಁನಮಿಸುವುದೇ ಸಮ್ಮತ.

ಹಬ್ಬಗಳ ಸಾಲು -ತಿಳಿ ಒಳತಿರುಳು

ನಮ್ಮಲ್ಲೇನು ಕೊರತೆ ಹಬ್ಬಗಳ ಸಾಲು ಸಾಲು,
ಸಿಹಿ ತಿಂದು ಹೊಸಬಟ್ಟೆ ತೊಟ್ಟು ಮೆರೆವ ಗೀಳು,
ಯಾಂತ್ರಿಕ ಓಟದಲಿ ಕೊಚ್ಚಿಹೋಗದಿರಲಿ ಬಾಳು,
ಅರ್ಪಿಸವಗೆ ನಿತ್ಯ ಆಯಾ ದಿನಕರ್ಮದ ಹೋಳು.

ಚಿಂತಕರ ಚಾವಡಿ

ಮರ್ಕಟ ಮನವೇ ಆಗದಿರು ಹುಚ್ಚುಖೋಡಿ,
ಬಳಸಿಕೊ ಸಿಕ್ಕಾಗ ಚಿಂತಕರ ಚಾವಡಿ,
ಬಲು ಅಪರೂಪ ಸಜ್ಜನರೊಂದಿಗಿನ ವೇಳೆ,
ಖಚಿತವಿಲ್ಲ ಮತ್ತೆ ಸಿಗದಿರಬಹುದು ನಾಳೆ.

ಚಲಪ್ರತಿಮೆಗಳ ಪೂಜೆ

ನಡೆಯಲಿ ಸಾಂಪ್ರದಾಯಿಕ ಪೂಜೆ ಪುನಸ್ಕಾರ,
ಚಲಪ್ರತಿಮೆಗಳಿಗೆ ಆಗದಿರಲಿ ಅಪಚಾರ,
ಬಂದವರಿಗೆ ಉಪಚರಿಸಿ ಉಣಬಡಿಸು,
ಅಂತರ್ಯಾಮಿಗೆ ನೈವೇದ್ಯ ಎಂದು ನಮಿಸು.


(Contributed by Shri Govind Magal)

Monday 9 May 2016

Sāra Saṅgama 29

ಸಾರ ಸಂಗಮ  by “ತ್ರಿವೇಣಿ ತನಯ

ಮಿತ -ಅಮಿತ

ಹುಟ್ಟು ಸಾವುಗಳ ಚಕ್ರ ಅಬಾಧಿತ,
ಎಲ್ಲವೂ ಇಲ್ಲಿ ಪೂರ್ವನಿಯೋಜಿತ,
ಮಿತಿ ಅರಿತು ನಡೆದರೆ ಸೊಗಸು ಸಂಸಾರ,
ತಿಳಿಯಬಲ್ಲವರ್ಯಾರು "ಅಮಿತ"ನ ವ್ಯಾಪಾರ.

ಆತ್ಮ -ಪರಮಾತ್ಮ

ಅನಾದಿಕಾಲದ ಋಣಾನುಬಂಧ,
ಜನ್ಮ ಜನ್ಮಾಂತರಗಳ ಬಿಡದ ಸಂಬಂಧ,
ಸಂಬಂಧದರಿವು ಸುಗಮ ಬದುಕಿಗೆ ದಾರಿ,
ಅರಿವಾಗದಿರೆ ಮೇಲೇರಲಾಗದ ದುರ್ಗಮ ಏರಿ .

ಹಾವು ಏಣಿಯಾಟ

ತಿಳಿದಿರು ಬಾಳೊಂದು ಹಾವು ಏಣಿಯಾಟ,
ಮೇಲೇರುತಿರುವಾಗ ಎಳೆವ ಹಾವಿನ ಕಾಟ,
ವಶಪಡಿಸಿಕೋ ಹಾವನ್ನು ಏರಿಸದನು ಮೇಲೆ,
ವಶಪಡಿಸಿಕೊಳ್ಳುವ ಕಲೆ ಕರುಣಿಸುವುದವನ ಲೀಲೆ.

ಅಸಮಾನ್ಯನ ಅನುಸಂಧಾನ

ಭಗವಂತ -ಜ್ಞಾನ ಸ್ವರೂಪ,
ಗ್ರಹಿಕೆ -ಸ್ವಭಾವ ಸ್ವರೂಪ,
ಕಲ್ಪನೆ -ನಮ್ಮ ನಮ್ಮ ಯೋಗ್ಯತೆ,
ಕುರುಡರು ಆನೆಯ ಕಂಡಂತೆ,
ಅವನಾಳ ವಿಸ್ತಾರ ಎಟುಕೀತೇ?
ತಾಯಿ ಲಕ್ಷ್ಮಿಗೇ ಸಿಕ್ಕಿಲ್ಲ ಅವನಳತೆ!!!.

ದಶಾವತಾರ ಮನನ -ಸದಾಚಾರದ ಜೀವನ

ಮತ್ಸ್ಯ -ನೆನೆದು ಭವಸಾಗರವ ಈಜು.
ಕೂರ್ಮ -ನೆನೆದು ಸಂಸಾರ ಭಾರ ಹೋರು.
ವರಾಹ -ನೆನೆದು ದುಷ್ಟರ ನಿಗ್ರಹಿಸು.
ನಾರಸಿಂಹ -ನೆನೆದು ಅರಿಗಳ ಗೆಲ್ಲು.
ವಾಮನ -ನೆನೆದು ಬೇಡುವುದನ್ನೇ ಬೇಡು.
ಪರಶುರಾಮ -ನೆನೆದು ದುಷ್ಟಶಕ್ತಿಗಳ ಗೆಲ್ಲು.
ದಾ .ರಾಮ -ಮರ್ಯಾದಾ ಗುಣಗಳ ಬೇಡು.
ಕೃಷ್ಣ -ನೆನೆದು ಸಮಯವರಿತು ಧರ್ಮ ಆಚರಿಸು.
ಬುದ್ಧ -ನೆನೆದು ಪ್ರಬುದ್ಧನಾಗು.
ಕಲ್ಕಿ -ನೆನೆದು ಕಲಿಬಾಧೆ ಗೆಲ್ಲು.


(Contributed by Shri Govind Magal)

Sunday 8 May 2016

Sāra Saṅgama 28

ಸಾರ ಸಂಗಮ  by “ತ್ರಿವೇಣಿ ತನಯ

ಎಲ್ಲರ ಹಿತ -ದೇವರು ಪ್ರೀತ

ಏನೇ ಮಾಡು-ಏನೇ ಕೊಡು,
ಭಗವತ್ಪೂಜೆಯೆಂದು ಮಾಡು,
ಅದರ ಖುಷಿಯೇ ಬೇರೆ ನೋಡು,
ಎಲ್ಲದರಲಿ ಎಲ್ಲರ "ಹಿತ"ವ ಬೇಡು,
ಮಾಡುವುದು ನೀನಲ್ಲ ಮಾಡಿಸುವುದವನು,
ಮಾಡುತ ಕೃಷ್ಣಾರ್ಪಣವೆನ್ನು ಹೋಗುವುದೇನು?

ಕಾಲ

ಚಳಿಗಾಲ ಮಳೆಗಾಲ ಬೇಸಿಗೆ ಕಾಲ,
ದಿನ ವಾರ ಮಾಸ ವರ್ಷಬದಲು ಕಾಲ,
ಇಷ್ಟವಾದ್ರೆ ಒಳ್ಳೇ ಕಾಲ ಆಗದಿರೆ ಕಷ್ಟಕಾಲ,
ಕೆಲವೊಮ್ಮೆ ಸಕಾಲ ಮತ್ತೆ ಪ್ರದೋಷ ಕಾಲ,
ಭೂತ ವರ್ತಮಾನ ಭವಿಷ್ಯತ್ ಕಾಲ,
ಅರಿತು ಬಳಸಿಕೊಂಡರೆ ಎಲ್ಲ ಪರ್ವಕಾಲ.

ಪುಣ್ಯಕೋಟಿ

ಪರಮ ಪವಿತ್ರ ಪುಣ್ಯಕೋಟಿ ಗೋವು,
ಕಳೆವುದು ಹತ್ತಾರು ಪಾಪ --ನೋವು,
ಮರೆಯದೇ ಚೆನ್ನಾಗಿ ಕಾಪಾಡು ಅದನು,
ಎಲ್ಲರನೂ ಸಲಹುತಿಹ ಕಾಮಧೇನು.

ಆತ್ಮ ಸಂಬಂಧ

ಬಂಧು ಅಲ್ಲ ಬಳಗ ಅಲ್ಲ ಏನೀ ಬಾಂಧವ್ಯ?
ಸಂಬಂಧಗಳ ಬೆಸೆಯುತಿದೆ ಚುಟುಕು ಕಾವ್ಯ,
ಸ್ನೇಹ ವಿಶ್ವಾಸ ಬೆಳೆಯಲು ಬೇಕಿಲ್ಲ ರಕ್ತ ಸಂಬಂಧ,
ಇರಬೇಕು ಸಮಾನಮನಸ್ಕರ ಆತ್ಮ ಸಂಬಂಧ.

ಪ್ರಕೃತಿ -ವಿಕೃತಿ

ಬೇಡದೇ ಸೂರ್ಯ ಬೆಳಕು ಶಾಖ ನೀಡುವ,
ಕೇಳದೇ ವಾಯು ನಿತ್ಯ ತಾನು ಬೀಸುವ,
ಪರರಿಗಾಗೇ ಹರಿಯುವ ಸಿಹಿ ನೀರು,
ನಮ್ಮಹೊಟ್ಟೆಗೆಂದೇ ಬೆಳೆವ ತೆನೆ ಪೈರು,
ಇವರ್ಯಾರೂ ಎಂದೂ ಕೇಳಿಲ್ಲ ಸುಂಕ,
ಸ್ಮರಿಸಿ ವಂದಿಸಲೂ ನಮಗೇನೋ ಬಿಂಕ.


(Contributed by Shri Govind Magal)

Saturday 7 May 2016

Sāra Saṅgama 27

ಸಾರ ಸಂಗಮ  by “ತ್ರಿವೇಣಿ ತನಯ

ತುಂಬಿದ ಕೊಡ

ಖಾಲಿ ಕೊಡ ಸದ್ದು ಮಾಡುವುದಿಲ್ಲ,
ತುಂಬಿದ ಕೊಡ ತುಳುಕುವುದಿಲ್ಲ,
ತೊಂದರೆ ಅರೆಬೆಂದ ಮಡಿಕೆಗಳಿಂದ,
ಅಂಥವರಿಂದ ದೂರ ಇರುವುದು ಚೆಂದ.

ನೆರಳು -ಬೆಳಕು

ಜೀವನವೊಂದು ನೆರಳು ಬೆಳಕಿನ ಆಟ,
ಎರಡೂ ಉಂಟು-ಬೇವು ಬೆಲ್ಲದ ಊಟ,
ಮುಳುಗಿ ಅಂಟಿಕೊಂಡರದೇ ಯಮಕಾಟ,
ಬಂದದ್ದು ಬರಲಿ ಇರಲಿ ನಿರ್ಲಿಪ್ತ ನೋಟ.

ಸರ್ವಾಂತರ್ಯಾಮಿ

ಯಾರ್ಯಾರಲ್ಲಿ ನಿಂತು ಏನೇನು ಕೊಡುತಿರುವೆ ಸ್ವಾಮಿ,
ಅಹುದಹುದು ನೀನೇ ಸರ್ವ-ಸರ್ವರಂತರ್ಯಾಮಿ,
ಹೀಗೆಯೇ ಅಲ್ಲಲ್ಲಿ ನಿಂತು ಹೊಲೆ ವಿಷಯಗಳ ಕೊಲ್ಲು,
ಜನ್ಮಾಂತರಕ್ಕಾದರೂ ಆಗಲಿ ಚೆಲುಮೂರ್ತಿ ಈ ಕಲ್ಲು.

ಆತ್ಮಬಂಧು

ಅಯ್ಯೋ ಅಮ್ಮಾ ಅನ್ನದೇ ರಾಮ ಕೃಷ್ಣ ಅನ್ನು,
ಜೊತೆಗೆ ಗುಣಾನುಸಂಧಾನವಿದ್ದರೆ ಬಲು ಚೆನ್ನು,
ಬೇರಾರಿಲ್ಲ ಕಾಯ್ವವವರು ಹಿಂದು ಮುಂದು,
ಜನ್ಮ ಜನ್ಮಕ್ಕವನೊಬ್ಬನೇ ಕೈಬಿಡದ ಆತ್ಮಬಂಧು.
                                                      
ಜೀವನ ಯಜ್ಞ

ಕಲಿತವರು -ಯಾರಿಲ್ಲ,
ಕಲಿಯುವವರೇ-ಎಲ್ಲ,
ಕಲಿಯುತಲಿರುವುದೇ ಜೀವನ,
ಕಲಿಯುವುದಾಗಲಿ ಜೀವನ ಯಜ್ಞ.


(Contributed by Shri Govind Magal)

Thursday 5 May 2016

Sāra Saṅgama 26

ಸಾರ ಸಂಗಮ  by “ತ್ರಿವೇಣಿ ತನಯ

ತುಂಬಿದ ಕೊಡ

ಖಾಲಿ ಕೊಡ ಸದ್ದು ಮಾಡುವುದಿಲ್ಲ,
ತುಂಬಿದ ಕೊಡ ತುಳುಕುವುದಿಲ್ಲ,
ತೊಂದರೆ ಅರೆಬೆಂದ ಮಡಿಕೆಗಳಿಂದ,
ಅಂಥವರಿಂದ ದೂರ ಇರುವುದು ಚೆಂದ.

ನೆರಳು -ಬೆಳಕು

ಜೀವನವೊಂದು ನೆರಳು ಬೆಳಕಿನ ಆಟ,
ಎರಡೂ ಉಂಟು-ಬೇವು ಬೆಲ್ಲದ ಊಟ,
ಮುಳುಗಿ ಅಂಟಿಕೊಂಡರದೇ ಯಮಕಾಟ,
ಬಂದದ್ದು ಬರಲಿ ಇರಲಿ ನಿರ್ಲಿಪ್ತ ನೋಟ.

ಸರ್ವಾಂತರ್ಯಾಮಿ

ಯಾರ್ಯಾರಲ್ಲಿ ನಿಂತು ಏನೇನು ಕೊಡುತಿರುವೆ ಸ್ವಾಮಿ,
ಅಹುದಹುದು ನೀನೇ ಸರ್ವ-ಸರ್ವರಂತರ್ಯಾಮಿ,
ಹೀಗೆಯೇ ಅಲ್ಲಲ್ಲಿ ನಿಂತು ಹೊಲೆ ವಿಷಯಗಳ ಕೊಲ್ಲು,
ಜನ್ಮಾಂತರಕ್ಕಾದರೂ ಆಗಲಿ ಚೆಲುಮೂರ್ತಿ ಈ ಕಲ್ಲು.

ಆತ್ಮಬಂಧು

ಅಯ್ಯೋ ಅಮ್ಮಾ ಅನ್ನದೇ ರಾಮ ಕೃಷ್ಣ ಅನ್ನು,
ಜೊತೆಗೆ ಗುಣಾನುಸಂಧಾನವಿದ್ದರೆ ಬಲು ಚೆನ್ನು,
ಬೇರಾರಿಲ್ಲ ಕಾಯ್ವವವರು ಹಿಂದು ಮುಂದು,
ಜನ್ಮ ಜನ್ಮಕ್ಕವನೊಬ್ಬನೇ ಕೈಬಿಡದ ಆತ್ಮಬಂಧು.

ಜೀವನ ಯಜ್ಞ

ಕಲಿತವರು -ಯಾರಿಲ್ಲ,
ಕಲಿಯುವವರೇ-ಎಲ್ಲ,
ಕಲಿಯುತಲಿರುವುದೇ ಜೀವನ,
ಕಲಿಯುವುದಾಗಲಿ ಜೀವನ ಯಜ್ಞ.


(Contributed by Shri Govind Magal)

Tuesday 3 May 2016

Sāra Saṅgama 25

ಸಾರ ಸಂಗಮ  by “ತ್ರಿವೇಣಿ ತನಯ

ವ್ಯವಹಾರ -ಸದಾಚಾರ

ನೀ ಹುಟ್ಟಿಬಂದಾಗ ಹೊತ್ತು ತಂದದ್ದೇನು?
ಸತ್ತಾಗ ನೀ ಹೊತ್ತು ಕೊಂಡೊಯ್ಯುವುದೇನು?
ನಿನ್ನ ದೇಹವೇ ಹೆತ್ತವರಿತ್ತಿರುವ ಭಿಕ್ಷೆ,
ಮರೆಯದಿರು ಬಾಳೊಂದು ಅಗ್ನಿಪರೀಕ್ಷೆ.

ನಗು ನಗುತ ಪ್ರೀತಿಹಂಚುತ ಬಾಳು,
ಆದೀತು ಬಾಳಾಗ ಸಿಹಿಹಣ್ಣಿನ ಹೋಳು,
ಬಂದಿರುವುದೇ ಕಳೆದುಕೊಳ್ಳಲು ಕೇಳು,
ಕಳೆದುಕೊಳ್ಳದ ಹೊರತು ಏರೋದ್ಹೇಗೆ ಹೇಳು.

ಮಜಲು -ಗೋಜಲು

ಅರ್ಥವಾಗದ ಜೀವನದ ಮಜಲುಗಳು,
ಅರ್ಥೈಸಿಕೊಳ್ಳಬೇಕಾದ ಗೋಜಲುಗಳು,
ಬಂದಂತೆ ತೆರೆದಂತೆ ಒಪ್ಪಿ ಅನುಭವಿಸು,
ಎಲ್ಲವೂ ಅವನದೇ ಪೂಜೆ ಎಂದರ್ಪಿಸು.

ಪಾರದರ್ಶಕತೆ -"ಪರ"ದರ್ಶಕತೆ

ಮುಖವಾಡ ಕಿತ್ತುಬಿಡು,
ಒಳದನಿಗೆ ಕಿವಿ ಕೊಡು,
ಒಳಹೊರಗುಗಳ ಒಂದು ಮಾಡು,
ಮುಚ್ಚುತಿರು ಅಸಹ್ಯ ಕಂದರ,
ಕಟ್ಟಿಕೋ ಸ್ನೇಹದ ಹಂದರ,
ಪಾರದರ್ಶಕ ಬದುಕೆಷ್ಟು ಸುಂದರ.

(Contributed by Shri Govind Magal)