ಸಾರ ಸಂಗಮ by “ತ್ರಿವೇಣಿ ತನಯ”
ಸಜ್ಜನರ ನಂಟು-ಜ್ಞಾನದ ಗಂಟು
ಪ್ರತಿನಿತ್ಯವಿರಲಿ ಸಂಭ್ರಮ ಸಡಗರ,
ಕಲಿಯುವ ಹಸಿವಿರಲದು ನಿರಂತರ,
ಜ್ಞಾನವೊಂದೇ ಜೊತೆ ಬರುವ ಗಂಟು,
ಸಜ್ಜನರೊಂದಿಗಿರಲಿ ಶಾಶ್ವತ ನಂಟು .
ಪ್ರಪಾತದೆಡೆಗೆ ಪಯಣ
ಯಾರಿಗೇನೇ ಹೇಳು-ನನಗೆಲ್ಲಾ ಗೊತ್ತು,
ಜ್ಞಾನಿಗಳನ್ನೂ ಮೀರಿಸುವ ಭಾರೀ ಗತ್ತು,
ಸ್ವಂತ ಬುದ್ಧಿಯದು ಇಲ್ಲವೇ ಇಲ್ಲ,
ಇನ್ನೊಬ್ಬರ ಮಾತು ಕೇಳೋದೇ ಇಲ್ಲ.
ಎಲ್ಲಾ ಗೊತ್ತೆನ್ನುವ ಸ್ವಭಾವ ಸಂಕುಚಿತ,
ಗಮ್ಯವದರದು ಖಂಡಿತ --ಪ್ರಪಾತ,
ಜ್ಞಾನವದು ಎಂದೂ ಮಾಸದ ಆಭರಣ,
ಸೋಸಿ ಕೇಳುವ ಕಿವಿಗಳಿರೆ ಭೂಷಣ .
ಪ್ರತಿಯೊಬ್ಬನೂ ಹುಟ್ಟಾ ಪಂಡಿತ,
ಬೇರೆಯವರ ಮಾತು ಆಗಲ್ಲ ಹಿತ,
ಆಗುವುದೆಂದಿಗೆ ತಿಳಿವಿನ ಹೊಳವು,
ಸೃಷ್ಟಿಕರ್ತನೇ ಕೊಡಬೇಕದರ ಸುಳಿವು.
ಹುಡುಕುವ ಮನ-ವಿಕಾಸದೆಡೆ ಗಮನ
ಹುಡುಕುವ ಮನವಿರಲಿ ಬೆದಕುವ ಕಣ್ಣಿರಲಿ,
ಹುಡುಕುವುದು ಬೆದಕುವುದು ವಿಕಾಸದೆಡೆಗಿರಲಿ,
ಒಪ್ಪುವ ನಿರ್ಮಲ ಮನವಿರೆ ನಿತ್ಯವೂ ಪಾಠ,
ಪಾಠ ಒಳಗಿಳಿಯುತಿರೆ ಸರಿದಾರಿಯ ಓಟ.
(Contributed by Shri Govind Magal)
No comments:
Post a Comment
ಗೋ-ಕುಲ Go-Kula