Saturday 9 July 2016

Sāra Saṅgama 34

ಸಾರ ಸಂಗಮ  by “ತ್ರಿವೇಣಿ ತನಯ

ಅಸ್ವತಂತ್ರ -ಸರ್ವಸ್ವತಂತ್ರ

ಎಲ್ಲರೊಳಗಾಡುವ ಅಂತರ್ಯಾಮಿಯನೋಡು,
ಜ್ಞಾನ ಗಟ್ಟಿಯಾಗಲೆಂದು ಅನವರತ ಬೇಡು,
ಏನು ಮಾಡಬಲ್ಲೆ ನೀನು ಅಸ್ವತಂತ್ರ,
ಸರ್ವಾಂತರ್ಯಾಮಿ ಅವ ಸರ್ವಸ್ವತಂತ್ರ.

ಬಿಂಬ -ಪ್ರತಿಬಿಂಬ

ನಾನೆಂಬ ಬೋನೋಳಗೆ ಅಹಂಕಾರದ ಸಿಂಹ,
ಹುಡುಕಾಟವಿದ್ದವರಿಗೆ ಅರಿವಾಗುವ ಗುಮ್ಮ ,
ನಾನೆಂದು ಹೇಳಿಕೊಳ್ಳಬಲ್ಲವನೊಬ್ಬನೇ ಪರಬ್ರಹ್ಮ,
ಮಿಕ್ಕವರೆಲ್ಲರೂ ಅವನದೇ ಪ್ರತಿಬಿಂಬವಮ್ಮ.

ಶಿಸ್ತು -ಬಿಡುಗಡೆಗೆ ಅಸ್ತು

ಲೋಕದಲ್ಲಿ ಕೂಡಾ ಶಿಸ್ತೇ ಪ್ರಧಾನ ನೋಡು,
ಶಿಸ್ತಿನ ಬಂಧನದಲ್ಲೇ ಬಿಡುಗಡೆಯ ಬೇಡು,
ಮಿತಿ ಅರಿತು ನಿಯಾಮಕಗೆ ಮಣಿವುದೇ ಶಿಸ್ತು,
ಶರಣಾದವರಿಗಷ್ಟೇ ಸಿಕ್ಕೀತು ಬಿಡುಗಡೆಗೆ ಅಸ್ತು.

ಪದಬಂಧ

ಬದುಕೊಂದು ಪದಬಂಧ,
ಇರಲಿ ಮಧುರ ಸಂಬಂಧ,
ಪದಗಳಲ್ಲಿರಲಿ ನಿರ್ಮಲ ಪ್ರೀತಿ,
ಅದೇ ನೋಡು ಬಾಳುವ ರೀತಿ.

ಪುರದ ಸ್ವತ್ತು -ಪುರುಸೊತ್ತು

ಕಾಣದ ಮಹತ್ತು ಎಲ್ಲರ ಪುರದ ಸ್ವತ್ತು,
ಕಾಣದ ಕಾಂಬುದಕೆ ಯಾರಿಗಿಲ್ಲ ಪುರುಸೊತ್ತು,
ಪುರುಸೊತ್ತಾಗಿದೆ ಅನ್ಸಿದಾಗ ಎಷ್ಟಿರತ್ತೊ ಹೊತ್ತು,
ಈ ಮತಿಹೀನಬಾಳ ಓಟವೇ ಜೀವನ ಅನ್ನೋ ಗಮ್ಮತ್ತು.


(Contributed by Shri Govind Magal)

Tuesday 5 July 2016

Sāra Saṅgama 33

ಸಾರ ಸಂಗಮ  by “ತ್ರಿವೇಣಿ ತನಯ

ಜ್ಞಾನದ ಲಾಂದ್ರ
ಹೊರಗೆ ಆಕಾಶದಲ್ಲಿ ಹೊಳೆವ ಚಂದ್ರ,
ಮನದಾಕಾಶದಲ್ಲಿ ಹತ್ತೇ ಇಲ್ಲ ಲಾಂದ್ರ,
ಚಂದ್ರನಿರದ ಆಕಾಶ ಬರೀ ಕತ್ತಲು,
ಲಾಂದ್ರವಿರದ ಮನವಾದೀತೆಂತು ಬೆತ್ತಲು?
ನಿಜ ಗಳಿಕೆ
ಮಾನವನಿಗೆ ಜ್ಞಾನವೇ ಭೂಷಣ,
ಬಾಹ್ಯಾಡಂಬರ-ವಸನ ಆಭರಣ,
ಸತತ ಕಲಿಕೆಯಿಂದಲೇ ನಿಜ ಗಳಿಕೆ,
ತುಂಬುವುದದೇ ಅಧ್ಯಾತ್ಮ ಕುಡಿಕೆ.
ಬಾಳೊಂದು ಒಗಟು
ಎಲ್ಲರ ಬಾಳೂ ಒಂದು ಒಗಟು,
ಬಿಡಿಸಲಾಗದ ಕ್ಲಿಷ್ಟ ಕಗ್ಗಂಟು,
ಅರಿತವರಿಗೆ ಗೊತ್ತದರ ಗುಟ್ಟು,
ಕಲಿಯುತ ಅರಿವ ಬುತ್ತಿಯ ಕಟ್ಟು.
ವೇದನೆ -ನಿವೇದನೆ
ಯಾರೆದುರು ನಿನ್ನ ಹೀನ ನಿವೇದನೆ?
ಎಲ್ಲರದೂ ತೀರಲಾರದ ವೇದನೆ,
ವೇದನೆ ಇರುವಲ್ಲಿ ಹ್ಯಾಗೆ ಸಾಧನೆ?
ಗಟ್ಟಿ ಹಿಡಿ-ವೇದ ಪ್ರತಿಪಾದ್ಯನನ್ನೇ.
ದೇವತಾ ಗಣ .ಜೀವ ಕಣ.
ಎಲ್ಲಾ ನಡೆಸುವುದೇ ದೇವತಾ ಗಣ,
ಇಲ್ಲವಾದರೆ ಎಲ್ಲವೂ ಭಣ ಭಣ,
ಬೃಹತ್ ವ್ಯಾಪಾರದಲಿ ನೀನೊಂದು ಕಣ,
ಎಂದೂ ಇರಲಿ ಶಾರಣ್ಯದ ಸ್ಮರಣ.

(Contributed by Shri Govind Magal)

Sunday 3 July 2016

Sāra Saṅgama 32

ಸಾರ ಸಂಗಮ  by “ತ್ರಿವೇಣಿ ತನಯ

ತಿಳಿ ಕೊಳ

ಕೋಪವದು ಕೊಳಕಿನ ಸಂಕೇತ,
ನಿರ್ಲಿಪ್ತ ಮನ ಕೋಪದಿಂದ ಮುಕ್ತ,
ಶುದ್ಧ ಮನವದು ಕದಡದ ಕೊಳ,
ಪಾರದರ್ಶಕವಿರೆ ತಿಳಿದೀತು ಆಳ.

ಜ್ಞಾನ-ಎಲ್ಲೆಡೆ ಸಲ್ಲುವ ಆಭರಣ

ಭಾರವೆತ್ತುವವಗೆ ಭಾರವೇನು ಲೆಕ್ಕ?
ಕಠಿಣ ಪರಿಶ್ರಮಿಗೆ ಗೆಲುವದು ಪಕ್ಕಾ,
ನಿಜ ಜ್ಞಾನಿಗೆ ಯಾವ ದೇಶವಾದರೇನು?
ಎಲ್ಲರನೂ ಪ್ರೀತಿಸುವವ ಎಲ್ಲಿದ್ದರೇನು!

ಜೀವನ ಜಾತ್ರೆ -ಶಿಸ್ತಿನ ಮಾತ್ರೆ

ಜಗತ್ತೇ ಜೀವಿಗಳು ಬಂದು ಹೋಗುವ ಜಾತ್ರೆ,
ನಿಲ್ಲದೇ ನಡೆದಿದೆ ಸೂರ್ಯನ ಶಿಸ್ತಿನ ಯಾತ್ರೆ,
ಅದೇ ಸೂರ್ಯ ಸಂಜೆ ಸಾಗರ ನುಂಗುವ ಮಾತ್ರೆ,
ಜೀವಿಗಳಿಗಿರಲಿ ಶಿಸ್ತು-ತುಂಬಲಿ ಸಾಧನಾ ಪಾತ್ರೆ.

ಅಂತರಂಗದ ಕದ-ನಿರ್ಲಿಪ್ತತೆಯ ಹದ

ಅಂತರಂಗದ ಕದವ ತೆಗೆವುದೆಂತು?
ನಿರ್ಲಿಪ್ತ ಮನವಿರೆ ಬೀಗದ ಕೈ ಸಿಕ್ಕೀತು,
ನಿರ್ಲಿಪ್ತತೆಗಾಗಿ ವ್ಯಾಮೋಹ ಕಳಚಲಿ,
ಬರುವುದೆಲ್ಲಾ ಬರಲಿ ಅಂಟದಂತಿರಲಿ.

ತಿಳಿದೆನೆಂದು ಅಳಿಯಬೇಡ

ತಿಳಿದೆ ತಿಳಿದೆ ಅಂದರೆ ಅಳಿದೆನೆಂದೇ ಅರ್ಥ,
ತಿಳಿದೆ ಎಂದು ಹೊರಟರೆ ತಿಳಿದದ್ದೆಲ್ಲವೂ ವ್ಯರ್ಥ,
ಸಾಗರದ ಆಳ-ಅಗಲವನು ಅಳೆದವರುಂಟೇ?
ಎಣೆಯಿಲ್ಲದ ಜ್ಞಾನಭಂಡಾರ ಕೈಗೆಟುದ ಗಂಟೇ!


(Contributed by Shri Govind Magal)

Saturday 2 July 2016

Sāra Saṅgama 31

ಸಾರ ಸಂಗಮ  by “ತ್ರಿವೇಣಿ ತನಯ

ಸಜ್ಜನರ ನಂಟು-ಜ್ಞಾನದ ಗಂಟು

ಪ್ರತಿನಿತ್ಯವಿರಲಿ ಸಂಭ್ರಮ ಸಡಗರ,
ಕಲಿಯುವ ಹಸಿವಿರಲದು ನಿರಂತರ,
ಜ್ಞಾನವೊಂದೇ ಜೊತೆ ಬರುವ ಗಂಟು,
ಸಜ್ಜನರೊಂದಿಗಿರಲಿ ಶಾಶ್ವತ ನಂಟು .

ಪ್ರಪಾತದೆಡೆಗೆ ಪಯಣ

ಯಾರಿಗೇನೇ ಹೇಳು-ನನಗೆಲ್ಲಾ ಗೊತ್ತು,
ಜ್ಞಾನಿಗಳನ್ನೂ ಮೀರಿಸುವ ಭಾರೀ ಗತ್ತು,
ಸ್ವಂತ ಬುದ್ಧಿಯದು ಇಲ್ಲವೇ ಇಲ್ಲ,
ಇನ್ನೊಬ್ಬರ ಮಾತು ಕೇಳೋದೇ ಇಲ್ಲ.

ಎಲ್ಲಾ ಗೊತ್ತೆನ್ನುವ ಸ್ವಭಾವ ಸಂಕುಚಿತ,
ಗಮ್ಯವದರದು ಖಂಡಿತ --ಪ್ರಪಾತ,
ಜ್ಞಾನವದು ಎಂದೂ ಮಾಸದ ಆಭರಣ,
ಸೋಸಿ ಕೇಳುವ ಕಿವಿಗಳಿರೆ ಭೂಷಣ .

ಪ್ರತಿಯೊಬ್ಬನೂ ಹುಟ್ಟಾ ಪಂಡಿತ,
ಬೇರೆಯವರ ಮಾತು ಆಗಲ್ಲ ಹಿತ,
ಆಗುವುದೆಂದಿಗೆ ತಿಳಿವಿನ ಹೊಳವು,
ಸೃಷ್ಟಿಕರ್ತನೇ ಕೊಡಬೇಕದರ ಸುಳಿವು.

ಹುಡುಕುವ ಮನ-ವಿಕಾಸದೆಡೆ ಗಮನ

ಹುಡುಕುವ ಮನವಿರಲಿ ಬೆದಕುವ ಕಣ್ಣಿರಲಿ,
ಹುಡುಕುವುದು ಬೆದಕುವುದು ವಿಕಾಸದೆಡೆಗಿರಲಿ,
ಒಪ್ಪುವ ನಿರ್ಮಲ ಮನವಿರೆ ನಿತ್ಯವೂ ಪಾಠ,
ಪಾಠ ಒಳಗಿಳಿಯುತಿರೆ ಸರಿದಾರಿಯ ಓಟ.


(Contributed by Shri Govind Magal)

Tuesday 10 May 2016

Sāra Saṅgama 30

ಸಾರ ಸಂಗಮ  by “ತ್ರಿವೇಣಿ ತನಯ

ಶಿಸ್ತು -ಅಶಿಸ್ತು

ನಿತ್ಯ ನೋಡುವೆವು ಸೂರ್ಯೋದಯ ಸೂರ್ಯಾಸ್ತ,
ಶಿಸ್ತಿನ ಪ್ರಕೃತಿಯೊಂದಿಗಿದ್ದರೂ ಬದುಕು ಅಸ್ತವ್ಯಸ್ತ,
ಬೃಹತ್ ಪ್ರಕೃತಿಯ ಓಟದಲ್ಲಿ ನೀನೊಂದು ಕಣ,
ಅರಿತು ತೀರಿಸಲೆತ್ನಿಸು ನಿನ್ನ ಪ್ರತಿಯೊಂದು ಋಣ.

ನಮಾಮಿ -ಅಂತರ್ಯಾಮಿ

ನಿತ್ಯ ಜೀವನದಲಿ ಪ್ರತಿಯೊಬ್ಬರನೂ ಗೌರವಿಸು,
ಒಳಗಿದ್ದು ಚೈತನ್ಯವೀವ ಅಂತರ್ಯಾಮಿಗೆ ನಮಿಸು,
ಸಾಲಿಗ್ರಾಮ ಮೂರ್ತಿಗಳಿಗಾಗದಿರಲಿ ಪೂಜೆ ಸೀಮಿತ,
ಎಲ್ಲರಲ್ಲಿರುವ ಶಕ್ತಿಗೆ ಬಾಗಿ ಁನಮಿಸುವುದೇ ಸಮ್ಮತ.

ಹಬ್ಬಗಳ ಸಾಲು -ತಿಳಿ ಒಳತಿರುಳು

ನಮ್ಮಲ್ಲೇನು ಕೊರತೆ ಹಬ್ಬಗಳ ಸಾಲು ಸಾಲು,
ಸಿಹಿ ತಿಂದು ಹೊಸಬಟ್ಟೆ ತೊಟ್ಟು ಮೆರೆವ ಗೀಳು,
ಯಾಂತ್ರಿಕ ಓಟದಲಿ ಕೊಚ್ಚಿಹೋಗದಿರಲಿ ಬಾಳು,
ಅರ್ಪಿಸವಗೆ ನಿತ್ಯ ಆಯಾ ದಿನಕರ್ಮದ ಹೋಳು.

ಚಿಂತಕರ ಚಾವಡಿ

ಮರ್ಕಟ ಮನವೇ ಆಗದಿರು ಹುಚ್ಚುಖೋಡಿ,
ಬಳಸಿಕೊ ಸಿಕ್ಕಾಗ ಚಿಂತಕರ ಚಾವಡಿ,
ಬಲು ಅಪರೂಪ ಸಜ್ಜನರೊಂದಿಗಿನ ವೇಳೆ,
ಖಚಿತವಿಲ್ಲ ಮತ್ತೆ ಸಿಗದಿರಬಹುದು ನಾಳೆ.

ಚಲಪ್ರತಿಮೆಗಳ ಪೂಜೆ

ನಡೆಯಲಿ ಸಾಂಪ್ರದಾಯಿಕ ಪೂಜೆ ಪುನಸ್ಕಾರ,
ಚಲಪ್ರತಿಮೆಗಳಿಗೆ ಆಗದಿರಲಿ ಅಪಚಾರ,
ಬಂದವರಿಗೆ ಉಪಚರಿಸಿ ಉಣಬಡಿಸು,
ಅಂತರ್ಯಾಮಿಗೆ ನೈವೇದ್ಯ ಎಂದು ನಮಿಸು.


(Contributed by Shri Govind Magal)

Monday 9 May 2016

Sāra Saṅgama 29

ಸಾರ ಸಂಗಮ  by “ತ್ರಿವೇಣಿ ತನಯ

ಮಿತ -ಅಮಿತ

ಹುಟ್ಟು ಸಾವುಗಳ ಚಕ್ರ ಅಬಾಧಿತ,
ಎಲ್ಲವೂ ಇಲ್ಲಿ ಪೂರ್ವನಿಯೋಜಿತ,
ಮಿತಿ ಅರಿತು ನಡೆದರೆ ಸೊಗಸು ಸಂಸಾರ,
ತಿಳಿಯಬಲ್ಲವರ್ಯಾರು "ಅಮಿತ"ನ ವ್ಯಾಪಾರ.

ಆತ್ಮ -ಪರಮಾತ್ಮ

ಅನಾದಿಕಾಲದ ಋಣಾನುಬಂಧ,
ಜನ್ಮ ಜನ್ಮಾಂತರಗಳ ಬಿಡದ ಸಂಬಂಧ,
ಸಂಬಂಧದರಿವು ಸುಗಮ ಬದುಕಿಗೆ ದಾರಿ,
ಅರಿವಾಗದಿರೆ ಮೇಲೇರಲಾಗದ ದುರ್ಗಮ ಏರಿ .

ಹಾವು ಏಣಿಯಾಟ

ತಿಳಿದಿರು ಬಾಳೊಂದು ಹಾವು ಏಣಿಯಾಟ,
ಮೇಲೇರುತಿರುವಾಗ ಎಳೆವ ಹಾವಿನ ಕಾಟ,
ವಶಪಡಿಸಿಕೋ ಹಾವನ್ನು ಏರಿಸದನು ಮೇಲೆ,
ವಶಪಡಿಸಿಕೊಳ್ಳುವ ಕಲೆ ಕರುಣಿಸುವುದವನ ಲೀಲೆ.

ಅಸಮಾನ್ಯನ ಅನುಸಂಧಾನ

ಭಗವಂತ -ಜ್ಞಾನ ಸ್ವರೂಪ,
ಗ್ರಹಿಕೆ -ಸ್ವಭಾವ ಸ್ವರೂಪ,
ಕಲ್ಪನೆ -ನಮ್ಮ ನಮ್ಮ ಯೋಗ್ಯತೆ,
ಕುರುಡರು ಆನೆಯ ಕಂಡಂತೆ,
ಅವನಾಳ ವಿಸ್ತಾರ ಎಟುಕೀತೇ?
ತಾಯಿ ಲಕ್ಷ್ಮಿಗೇ ಸಿಕ್ಕಿಲ್ಲ ಅವನಳತೆ!!!.

ದಶಾವತಾರ ಮನನ -ಸದಾಚಾರದ ಜೀವನ

ಮತ್ಸ್ಯ -ನೆನೆದು ಭವಸಾಗರವ ಈಜು.
ಕೂರ್ಮ -ನೆನೆದು ಸಂಸಾರ ಭಾರ ಹೋರು.
ವರಾಹ -ನೆನೆದು ದುಷ್ಟರ ನಿಗ್ರಹಿಸು.
ನಾರಸಿಂಹ -ನೆನೆದು ಅರಿಗಳ ಗೆಲ್ಲು.
ವಾಮನ -ನೆನೆದು ಬೇಡುವುದನ್ನೇ ಬೇಡು.
ಪರಶುರಾಮ -ನೆನೆದು ದುಷ್ಟಶಕ್ತಿಗಳ ಗೆಲ್ಲು.
ದಾ .ರಾಮ -ಮರ್ಯಾದಾ ಗುಣಗಳ ಬೇಡು.
ಕೃಷ್ಣ -ನೆನೆದು ಸಮಯವರಿತು ಧರ್ಮ ಆಚರಿಸು.
ಬುದ್ಧ -ನೆನೆದು ಪ್ರಬುದ್ಧನಾಗು.
ಕಲ್ಕಿ -ನೆನೆದು ಕಲಿಬಾಧೆ ಗೆಲ್ಲು.


(Contributed by Shri Govind Magal)

Sunday 8 May 2016

Sāra Saṅgama 28

ಸಾರ ಸಂಗಮ  by “ತ್ರಿವೇಣಿ ತನಯ

ಎಲ್ಲರ ಹಿತ -ದೇವರು ಪ್ರೀತ

ಏನೇ ಮಾಡು-ಏನೇ ಕೊಡು,
ಭಗವತ್ಪೂಜೆಯೆಂದು ಮಾಡು,
ಅದರ ಖುಷಿಯೇ ಬೇರೆ ನೋಡು,
ಎಲ್ಲದರಲಿ ಎಲ್ಲರ "ಹಿತ"ವ ಬೇಡು,
ಮಾಡುವುದು ನೀನಲ್ಲ ಮಾಡಿಸುವುದವನು,
ಮಾಡುತ ಕೃಷ್ಣಾರ್ಪಣವೆನ್ನು ಹೋಗುವುದೇನು?

ಕಾಲ

ಚಳಿಗಾಲ ಮಳೆಗಾಲ ಬೇಸಿಗೆ ಕಾಲ,
ದಿನ ವಾರ ಮಾಸ ವರ್ಷಬದಲು ಕಾಲ,
ಇಷ್ಟವಾದ್ರೆ ಒಳ್ಳೇ ಕಾಲ ಆಗದಿರೆ ಕಷ್ಟಕಾಲ,
ಕೆಲವೊಮ್ಮೆ ಸಕಾಲ ಮತ್ತೆ ಪ್ರದೋಷ ಕಾಲ,
ಭೂತ ವರ್ತಮಾನ ಭವಿಷ್ಯತ್ ಕಾಲ,
ಅರಿತು ಬಳಸಿಕೊಂಡರೆ ಎಲ್ಲ ಪರ್ವಕಾಲ.

ಪುಣ್ಯಕೋಟಿ

ಪರಮ ಪವಿತ್ರ ಪುಣ್ಯಕೋಟಿ ಗೋವು,
ಕಳೆವುದು ಹತ್ತಾರು ಪಾಪ --ನೋವು,
ಮರೆಯದೇ ಚೆನ್ನಾಗಿ ಕಾಪಾಡು ಅದನು,
ಎಲ್ಲರನೂ ಸಲಹುತಿಹ ಕಾಮಧೇನು.

ಆತ್ಮ ಸಂಬಂಧ

ಬಂಧು ಅಲ್ಲ ಬಳಗ ಅಲ್ಲ ಏನೀ ಬಾಂಧವ್ಯ?
ಸಂಬಂಧಗಳ ಬೆಸೆಯುತಿದೆ ಚುಟುಕು ಕಾವ್ಯ,
ಸ್ನೇಹ ವಿಶ್ವಾಸ ಬೆಳೆಯಲು ಬೇಕಿಲ್ಲ ರಕ್ತ ಸಂಬಂಧ,
ಇರಬೇಕು ಸಮಾನಮನಸ್ಕರ ಆತ್ಮ ಸಂಬಂಧ.

ಪ್ರಕೃತಿ -ವಿಕೃತಿ

ಬೇಡದೇ ಸೂರ್ಯ ಬೆಳಕು ಶಾಖ ನೀಡುವ,
ಕೇಳದೇ ವಾಯು ನಿತ್ಯ ತಾನು ಬೀಸುವ,
ಪರರಿಗಾಗೇ ಹರಿಯುವ ಸಿಹಿ ನೀರು,
ನಮ್ಮಹೊಟ್ಟೆಗೆಂದೇ ಬೆಳೆವ ತೆನೆ ಪೈರು,
ಇವರ್ಯಾರೂ ಎಂದೂ ಕೇಳಿಲ್ಲ ಸುಂಕ,
ಸ್ಮರಿಸಿ ವಂದಿಸಲೂ ನಮಗೇನೋ ಬಿಂಕ.


(Contributed by Shri Govind Magal)

Saturday 7 May 2016

Sāra Saṅgama 27

ಸಾರ ಸಂಗಮ  by “ತ್ರಿವೇಣಿ ತನಯ

ತುಂಬಿದ ಕೊಡ

ಖಾಲಿ ಕೊಡ ಸದ್ದು ಮಾಡುವುದಿಲ್ಲ,
ತುಂಬಿದ ಕೊಡ ತುಳುಕುವುದಿಲ್ಲ,
ತೊಂದರೆ ಅರೆಬೆಂದ ಮಡಿಕೆಗಳಿಂದ,
ಅಂಥವರಿಂದ ದೂರ ಇರುವುದು ಚೆಂದ.

ನೆರಳು -ಬೆಳಕು

ಜೀವನವೊಂದು ನೆರಳು ಬೆಳಕಿನ ಆಟ,
ಎರಡೂ ಉಂಟು-ಬೇವು ಬೆಲ್ಲದ ಊಟ,
ಮುಳುಗಿ ಅಂಟಿಕೊಂಡರದೇ ಯಮಕಾಟ,
ಬಂದದ್ದು ಬರಲಿ ಇರಲಿ ನಿರ್ಲಿಪ್ತ ನೋಟ.

ಸರ್ವಾಂತರ್ಯಾಮಿ

ಯಾರ್ಯಾರಲ್ಲಿ ನಿಂತು ಏನೇನು ಕೊಡುತಿರುವೆ ಸ್ವಾಮಿ,
ಅಹುದಹುದು ನೀನೇ ಸರ್ವ-ಸರ್ವರಂತರ್ಯಾಮಿ,
ಹೀಗೆಯೇ ಅಲ್ಲಲ್ಲಿ ನಿಂತು ಹೊಲೆ ವಿಷಯಗಳ ಕೊಲ್ಲು,
ಜನ್ಮಾಂತರಕ್ಕಾದರೂ ಆಗಲಿ ಚೆಲುಮೂರ್ತಿ ಈ ಕಲ್ಲು.

ಆತ್ಮಬಂಧು

ಅಯ್ಯೋ ಅಮ್ಮಾ ಅನ್ನದೇ ರಾಮ ಕೃಷ್ಣ ಅನ್ನು,
ಜೊತೆಗೆ ಗುಣಾನುಸಂಧಾನವಿದ್ದರೆ ಬಲು ಚೆನ್ನು,
ಬೇರಾರಿಲ್ಲ ಕಾಯ್ವವವರು ಹಿಂದು ಮುಂದು,
ಜನ್ಮ ಜನ್ಮಕ್ಕವನೊಬ್ಬನೇ ಕೈಬಿಡದ ಆತ್ಮಬಂಧು.
                                                      
ಜೀವನ ಯಜ್ಞ

ಕಲಿತವರು -ಯಾರಿಲ್ಲ,
ಕಲಿಯುವವರೇ-ಎಲ್ಲ,
ಕಲಿಯುತಲಿರುವುದೇ ಜೀವನ,
ಕಲಿಯುವುದಾಗಲಿ ಜೀವನ ಯಜ್ಞ.


(Contributed by Shri Govind Magal)

Thursday 5 May 2016

Sāra Saṅgama 26

ಸಾರ ಸಂಗಮ  by “ತ್ರಿವೇಣಿ ತನಯ

ತುಂಬಿದ ಕೊಡ

ಖಾಲಿ ಕೊಡ ಸದ್ದು ಮಾಡುವುದಿಲ್ಲ,
ತುಂಬಿದ ಕೊಡ ತುಳುಕುವುದಿಲ್ಲ,
ತೊಂದರೆ ಅರೆಬೆಂದ ಮಡಿಕೆಗಳಿಂದ,
ಅಂಥವರಿಂದ ದೂರ ಇರುವುದು ಚೆಂದ.

ನೆರಳು -ಬೆಳಕು

ಜೀವನವೊಂದು ನೆರಳು ಬೆಳಕಿನ ಆಟ,
ಎರಡೂ ಉಂಟು-ಬೇವು ಬೆಲ್ಲದ ಊಟ,
ಮುಳುಗಿ ಅಂಟಿಕೊಂಡರದೇ ಯಮಕಾಟ,
ಬಂದದ್ದು ಬರಲಿ ಇರಲಿ ನಿರ್ಲಿಪ್ತ ನೋಟ.

ಸರ್ವಾಂತರ್ಯಾಮಿ

ಯಾರ್ಯಾರಲ್ಲಿ ನಿಂತು ಏನೇನು ಕೊಡುತಿರುವೆ ಸ್ವಾಮಿ,
ಅಹುದಹುದು ನೀನೇ ಸರ್ವ-ಸರ್ವರಂತರ್ಯಾಮಿ,
ಹೀಗೆಯೇ ಅಲ್ಲಲ್ಲಿ ನಿಂತು ಹೊಲೆ ವಿಷಯಗಳ ಕೊಲ್ಲು,
ಜನ್ಮಾಂತರಕ್ಕಾದರೂ ಆಗಲಿ ಚೆಲುಮೂರ್ತಿ ಈ ಕಲ್ಲು.

ಆತ್ಮಬಂಧು

ಅಯ್ಯೋ ಅಮ್ಮಾ ಅನ್ನದೇ ರಾಮ ಕೃಷ್ಣ ಅನ್ನು,
ಜೊತೆಗೆ ಗುಣಾನುಸಂಧಾನವಿದ್ದರೆ ಬಲು ಚೆನ್ನು,
ಬೇರಾರಿಲ್ಲ ಕಾಯ್ವವವರು ಹಿಂದು ಮುಂದು,
ಜನ್ಮ ಜನ್ಮಕ್ಕವನೊಬ್ಬನೇ ಕೈಬಿಡದ ಆತ್ಮಬಂಧು.

ಜೀವನ ಯಜ್ಞ

ಕಲಿತವರು -ಯಾರಿಲ್ಲ,
ಕಲಿಯುವವರೇ-ಎಲ್ಲ,
ಕಲಿಯುತಲಿರುವುದೇ ಜೀವನ,
ಕಲಿಯುವುದಾಗಲಿ ಜೀವನ ಯಜ್ಞ.


(Contributed by Shri Govind Magal)

Tuesday 3 May 2016

Sāra Saṅgama 25

ಸಾರ ಸಂಗಮ  by “ತ್ರಿವೇಣಿ ತನಯ

ವ್ಯವಹಾರ -ಸದಾಚಾರ

ನೀ ಹುಟ್ಟಿಬಂದಾಗ ಹೊತ್ತು ತಂದದ್ದೇನು?
ಸತ್ತಾಗ ನೀ ಹೊತ್ತು ಕೊಂಡೊಯ್ಯುವುದೇನು?
ನಿನ್ನ ದೇಹವೇ ಹೆತ್ತವರಿತ್ತಿರುವ ಭಿಕ್ಷೆ,
ಮರೆಯದಿರು ಬಾಳೊಂದು ಅಗ್ನಿಪರೀಕ್ಷೆ.

ನಗು ನಗುತ ಪ್ರೀತಿಹಂಚುತ ಬಾಳು,
ಆದೀತು ಬಾಳಾಗ ಸಿಹಿಹಣ್ಣಿನ ಹೋಳು,
ಬಂದಿರುವುದೇ ಕಳೆದುಕೊಳ್ಳಲು ಕೇಳು,
ಕಳೆದುಕೊಳ್ಳದ ಹೊರತು ಏರೋದ್ಹೇಗೆ ಹೇಳು.

ಮಜಲು -ಗೋಜಲು

ಅರ್ಥವಾಗದ ಜೀವನದ ಮಜಲುಗಳು,
ಅರ್ಥೈಸಿಕೊಳ್ಳಬೇಕಾದ ಗೋಜಲುಗಳು,
ಬಂದಂತೆ ತೆರೆದಂತೆ ಒಪ್ಪಿ ಅನುಭವಿಸು,
ಎಲ್ಲವೂ ಅವನದೇ ಪೂಜೆ ಎಂದರ್ಪಿಸು.

ಪಾರದರ್ಶಕತೆ -"ಪರ"ದರ್ಶಕತೆ

ಮುಖವಾಡ ಕಿತ್ತುಬಿಡು,
ಒಳದನಿಗೆ ಕಿವಿ ಕೊಡು,
ಒಳಹೊರಗುಗಳ ಒಂದು ಮಾಡು,
ಮುಚ್ಚುತಿರು ಅಸಹ್ಯ ಕಂದರ,
ಕಟ್ಟಿಕೋ ಸ್ನೇಹದ ಹಂದರ,
ಪಾರದರ್ಶಕ ಬದುಕೆಷ್ಟು ಸುಂದರ.

(Contributed by Shri Govind Magal)

Wednesday 27 April 2016

Sāra Saṅgama 24

ಸಾರ ಸಂಗಮ  by “ತ್ರಿವೇಣಿ ತನಯ


ಗೀತ -ಬಾಳ ಸಂಗೀತ

ಗೀತೆ -ಅದಲ್ಲ ಬರೀ ಕೃಷ್ಣಾರ್ಜುನ ಸಂವಾದ,
ಸಕಲ ಮನುಕುಲಕೆ ಭಗವಂತನಿತ್ತ ಪ್ರಜ್ಞಾವಾದ,
ಆದರಲ್ಲಿದೆ ಲೋಕದ ಎಲ್ಲ ಪ್ರಶ್ನೆಗಳಿಗೂ ಪರಿಹಾರ,
ಮನೋವಿಜ್ಞಾನಿಯಾಗಿ ಕೃಷ್ಣನಿತ್ತ ಗೀತಾಸಾರ.

ಗೀತೆಯೆಂದರೆ ಅದು ಬರೀ ಗ್ರಂಥವಲ್ಲ,
ಸಕಲ ದುರಿತಗಳಿಗೂ ಪರಿಹಾರವಿದೆಯಲ್ಲ,
ನಿನ್ನ "ದೃಷ್ಟಿ "ಗೆ ತಕ್ಕಂಥ ಉತ್ತರವಿದೆ ನೋಡು,
ಅದನಿತ್ತ ಶ್ರೀಕೃಷ್ಣಗೆ ಸಾಷ್ಟಾಂಗ ಪೊಡಮಡು.

ಕಳಚು ವೇಷ -ಬಿಡು ಆವೇಶ

ನಿರ್ಮತ್ಸರನಾಗಿರಲು ಬಿಟ್ಟು ಬಿಡು ಆವೇಶ,
ನಿರ್ಲಿಪ್ತನಾಗುತ್ತ ತೊಡೆದುಬಿಡು ಆ ವೇಷ,
ಕೊಳಕಾದ ಮಡುವಲ್ಲಿ ನೂರಾರು ಅಲೆ,
ಕೊಳಕಿರದ ಎದೆಯಲ್ಲಿ ಹುಡುಕು ಬಿಂಬದ ನೆಲೆ.

ಮಾಡಿದ್ದುಣ್ಣೋ ಮಹರಾಯ

ಕರ್ಮಸಿದ್ಧಾಂತ ಅನಾದಿಯಿಂದ ಅನವರತ,
ಕಟ್ಟಿಕೊಂಡು ತಂದದ್ದನ್ನೇ ಉಣಬೇಕು ಖಚಿತ,
ಸ್ವಭಾವಗಳಿಂದಾದ ಕರ್ಮಗಳಿಂದ ಜನ್ಮ ನಿರ್ಣಯ,
ಅದೇ ಗಾದೆ ಮಾತು-ಮಾಡಿದ್ದುಣ್ಣೋ ಮಹರಾಯ.

ಮುಗ್ಧ ಶಾರಣ್ಯ

ಪುಟ್ಟ ನಾರದ ಒಪ್ಪಿಸಿದನೇ ವೇದ,
ಪ್ರಹ್ಲಾದ ಮಂಡಿಸಿದನೇ ಗೀತಾವಾದ,
ತರಳಧ್ರುವ ಮಾಡಿದನೇ ಶಾಸ್ತ್ರಾನುವಾದ,
ಮುಗ್ಧ ಶಾರಣ್ಯಕ್ಕೊಲಿಯಲಿಲ್ಲವೇ ಮುಕುಂದ.

(Contributed by Shri Govind Magal)

Tuesday 26 April 2016

Sāra Saṅgama 23

ಸಾರ ಸಂಗಮ  by “ತ್ರಿವೇಣಿ ತನಯ

ಬಿಡುವ ಸಂತೆ -ಬಿಡು ಚಿಂತೆ

ಎದ್ದು ಹೋಗುವವನಿಗೇಕೆ ಇಲ್ಲಿಯ ಚಿಂತೆ,
ಎಂದಾದರೂ ಒಂದಿನ ಬಿಡಲೇ ಬೇಕೀ ಸಂತೆ,
ಸಂತೆಯೊಳಿದ್ದರೂ ಅಂಟದ ಸಂತನಂತೆ ಇರು,
ಎಂತಾದರಾಗಲಿ ಅವನ ಕಾರುಣ್ಯವ ಬೇಡುತಿರು.


ಹುಚ್ಚು -ಕಿಚ್ಚು

ಬಿಟ್ಟುಬಿಡು ರೋಷ ದ್ವೇಷಗಳ ಹುಚ್ಚು,
ಬೆಳೆಯಿತೆಂದರೆ ಅದು ಆದೀತು ಕಿಚ್ಚು,
ಸ್ನೇಹದಿ ಬಾಳುತಾ ಪ್ರೀತಿಜ್ಯೋತಿಯ ಹಚ್ಚು,
ನಾಕು ದಿನದ ಬಾಳಿನಲಿ ಏಕೆ ಸಲ್ಲದ ರೊಚ್ಚು.


ಸರಳ -ನಿರಾಳ

ಮುಖವಾಡಗಳ ಬದುಕಿನ ಸಾಧನೆ ಏನು?
ಕಳಚಿದ ನಂತರ ಸತ್ಯವದು ಸಾಕಾರವಾಗದೇನು!
ಯಾರ ಮೆಚ್ಚಿಸಲೀ ನಾಟಕದ ಹುನ್ನಾರ,
ಸಹಜ ಸರಳತೆಯ ಮೆಚ್ಚುವ ರಮೇಶ್ವರ.


ಪುಣ್ಯಭೂಮಿ

ಎಲ್ಲಾ ಧರ್ಮವ ಒಪ್ಪಿದ ದೇಶ,
ಎಂದೂ ಬರಿದಾಗದ ಜ್ಞಾನದ ಕೋಶ,
ಊಸರವಳ್ಳಿಗಳಿಂದ ದೂರವೇ ಇರು,
ಉತ್ತಮ ಶಾಸ್ತ್ರಗಳ್ಹಿಡಿದು ಊರ್ಧ್ವಕ್ಕೇರು.


ನೆಮ್ಮದಿ -ನಿಜ ಜ್ಞಾನದಿ

ಲೋಕವೆಲ್ಲಾ ದುಡ್ಡು ಹೆಸರಿನ ಹಿಂದೆ,
ದುಡ್ಡಿದ್ದವರು ಅದರ ರಕ್ಷಣೆಗೆ ಮುಂದೆ,
ದುಡ್ಡು ಹೆಸರುಗಳು ನೆಮ್ಮದಿ ಕೊಡುವವಲ್ಲ,
ತೃಪ್ತಿ-ಜ್ಞಾನತೃಷೆಯ ಬಾಳದು ಆನಂದವೇ ಎಲ್ಲ.


(Contributed by Shri Govind Magal)

Monday 25 April 2016

Māta Sīta’s Opinion of Hanumān

ಹನುಮಂತನ ಬಗೆಗೆ, ತಾಯಿ ಸೀತಾದೇವಿಯ ಅಭಿಪ್ರಾಯ :

ಈಗ್ಗೆ ಕೆಲವು ದಿನಗಳ ಹಿಂದೆಯಷ್ಟೇ, ರಾಮಾಯಣದ ಕಿಷ್ಕಿಂದಾಕಾಂಡದ ಒಂದು ಪ್ರಸಂಗದಲ್ಲಿ ಪ್ರಭು ರಾಮಚಂದ್ರ, ಹನುಮಂತನ "ಸಂವಹನ ಕೌಶಲ್ಯದ ಬಗೆಗೆ" ಕೊಂಡಾಡಿದ್ದನ್ನು ನಾವೆಲ್ಲ ನೋಡಿದ್ದೇವೆ. ಇದೀಗ, ಮತ್ತೊಂದು ಮುಖದಿಂದ ಸುಂದರಕಾಂಡದ ಪ್ರಸಂಗವನ್ನೊಮ್ಮೆ ನೋಡೋಣ ... ಇಲ್ಲಿ ಹನುಮಂತನನ್ನು ಎದುರಾಗುವ ದೇಶ-ಕಾಲಗಳು ಬೇರೆ ಬೇರೆ, ಸಂಪರ್ಕಿಸಿದ ಪ್ರಸಂಗ ಹಾಗು ವ್ಯಕ್ತಿಗಳು ಕೂಡ ಬೇರೆ ಬೇರೆ, ಆದರೆ ಹನುಮಂತನ ಬಗೆಗಿನ ಅಭಿಪ್ರಾಯ ಮಾತ್ರ ಬೇರೆಯಲ್ಲ.  

ತ್ವಾಂ ದೃಷ್ಟ್ವಾ ಪ್ರಿಯವಕ್ತಾರಂ ಸಂಪ್ರಹೃಷ್ಯಾಮಿ ವಾನರ ।
ಅರ್ಧಸಂಜಾತಸ್ಯೇವ ವೃಷ್ಟಿಂ ಪ್ರಾಪ್ಯ ವಸುಂಧರಾ ॥ ೫-೪೦-೨ 

ವಾನರ = ಓ ಹನುಮಂತನೇ !  ತ್ವಾಂ ದೃಷ್ಟ್ವಾ = ನಿನ್ನನ್ನು ನೋಡಿ ; ಪ್ರಿಯವಕ್ತಾರಂ = ನಿನ್ನ ಆಪ್ಯಾಯಮಾನವಾದ ಮಾತುಗಳನ್ನು ಕೇಳಿ ; ಸಂಪ್ರಹೃಷ್ಯಾಮಿ = ನಾನು ಆನಂದ ಪರವಶಳಾಗಿದ್ದೇನೆ ; ಅರ್ಧಸಂಜಾತಸ್ಯೇವ = ಆಗಷ್ಟೇ ಬೀಜ ಮೊಳಕೆಯೊಡೆದು ಭೂಮಿಯಿಂದ ಟಿಸಿಲೊಡೆದು ಬಂದಂಥ ಎಳೆ ಬೆಳೆಗೆ ; ವೃಷ್ಟಿಂ ಪ್ರಾಪ್ಯ ವಸುಂಧರಾ = ಧರೆಗಿಳಿದ ಮಳೆ ಸಂತಸವನ್ನೀಯುವಂತೆ (ನಿನ್ನ ಮಾತು ಆನಂದ ತಂದಿದೆ)....

ಸೀತೆ ಹೇಳಿದ ಮಾತಿದು : "ಓ ಹನುಮಂತನೇ! ನಿನ್ನನ್ನು ಕಂಡು, ನಿನ್ನ ಮಧುರವಾದ ಮಾತುಗಳನ್ನು ಕೇಳಿ, ನನ್ನಲ್ಲಿ ಹೇಳಲಾರದಷ್ಟು ಸಂತೋಷ ಉಕ್ಕಿಬರುತ್ತಿದೆ  ... ಅದು ಮಳೆಯ ಸಿಂಚನದಿಂದ,  ಅರ್ಧ ಮೊಳಕೆಯೊಡೆದ ಚಿಗುರಿನ ಮೇಲೆ ಮೂಡಿಬರುವ ಸಂತೋಷದ ಅಲೆಗಳ ಹಾಗೆ ....”

*                         *                      *

Sometime back, we discussed the communication skills of Hanumān, as expressed by Lord Śrī Rāma in Kiśkindha Kāṅḍa. Here’s a view from Sundara Kāṅḍa. The countries are different, scenario is different, Hanumān’s viewers (judges) are different, but the opinion is undivided! 
  
त्वां दृष्ट्वा प्रियवक्तारं संप्रहृष्यामि वानर |
अर्ध सम्जात सस्य इव वृष्टिं प्राप्य वसुंधरा || ५-४०-२ ||

Tvāṁ dr̥ṣṭvā priyavaktāraṁ saṁprahr̥ṣyāmi vānara |
ardha samjāta sasya iva vr̥ṣṭiṁ prāpya vasuṁdharā || 5-40-2 ||

वानर (vānara) = O Hanumān!; दृष्ट्वा (dr̥ṣṭvā) = seeing; त्वां (tvāṁ) = you; प्रियवक्तारं (priyavaktāraṁ) = utter pleasant words; संप्रहृष्यामि (saṁprahr̥ṣyāmi) = I am overjoyed; वसुंधरा इव (vasuṁdharā iva) = as a field; अर्ध सम्जात सस्य (ardha samjāta sasya) = with half-sprouted crop of grain; (is over-joyed); प्राप्य इव (prāpyēva) = on receiving; वृष्टिं (vr̥ṣṭiṁ) = a shower of rain.

"O Hanumān! Seeing you, and listening to your pleasant words, I am as unbounded with joy as a field jostling with half-sprouted crop of grain, that is exhilarated on receiving a shower of rain."

(Contributors: Shri Harish B S Kannada/ Shri Prasad B S English/ Devanagari) 

Sāra Saṅgama 22

ಸಾರ ಸಂಗಮ  by “ತ್ರಿವೇಣಿ ತನಯ

ವೈವಿಧ್ಯ

ಎನಿತು ಸುಂದರವದು ಸೃಷ್ಟಿಯ ವೈವಿಧ್ಯ,
ತಿಳಿ-ಅದರಲ್ಲೇ ಇದೆ ತರ-ತಮದ ವಿದ್ಯ,
ಹರುಷದಿ ಮಾಡು ಎಲ್ಲ ಅವನಿಗೆ ನೈವೇದ್ಯ,
ಇರುವುದ ಒಪ್ಪಿ ಅವಗರ್ಪಿಸಲಷ್ಟೇ ನೀ ಬಾಧ್ಯ.


ಭ್ರಮೆ-ಜಮೆ

ತಂದದ್ದು ಒಯ್ಯುವುದು ಏನೂ ಇಲ್ಲ,
ಬದುಕು ಪೂರ್ತಿ ಕಲೆ ಹಾಕುತಿರುವೆ ಎಲ್ಲ,
ಬಿಟ್ಟು ಬಿಡು ಭ್ರಮೆ ಮಾಡು ಜ್ಞಾನದ ಜಮೆ,
ಕಳಚು ನೀ ಭ್ರಮೆ-ಕಳಚಿಯಾಳು "ಅಂಗಿ"ಗಳ ರಮೆ.

ನಾಟಕ ರಂಗ

ಯಾರು ಯಾರಿಗೂ ಇಲ್ಲಿ ಸಂಬಂಧವಿಲ್ಲ,
ನಾಟಕ ರಂಗದಲಿ ಸೇರಿರುವರೇ ಎಲ್ಲ,
ಪಾತ್ರ ನಿರ್ವಹಣೆಯದು ಇರಲಿ ಸಮರ್ಪಕ,
ಸಂಭಾವನೆ ಕೊಡುವವನು ಅವನು ನಿಯಾಮಕ.

ತಿಳಿದವರು-ಉಳಿದವರು

ಅಳಿದವರು ಉಳಿದವರು ತಿಳಿದವರ ನೋಡು,
ಅಳಿದಿದ್ದರೂ ಅನವರತ ತಿಳಿದವರದೇ ಹಾಡು,
ಬಾಳ ಸುಳಿಯಲ್ಲಿದ್ದರೂ ತಿಳಿವಿನ ಹಿಂದೆ ಬೀಳು,
ನೀನಳಿದರೂ ತಿಳಿವಿನ ಶಕ್ತಿ ಮೇಲೆತ್ತುವುದು ಕೇಳು.

ಜ್ಞಾನ -ಶಾಶ್ವತ

ರಾಜ ಮಹಾರಾಜರಾಗಿದ್ದವರದೂ ಏನಿಲ್ಲ ಸುಳಿವು,
ಸನ್ಯಾಸಿಗಳ ಬೃಂದಾವನಗಳಿರುವುದೇ ಸಾಕ್ಷಿ-ತಿಳಿವು,
ಜ್ಞಾನದ ಹಂಬಲವದು ಇರಲಿ ಸತತ,
ಜನ್ಮಾಂತರಗಳಾಗಲಿ ಬಿಡುಗಡೆ ಖಚಿತ.


(Contributed by Shri Govind Magal)

Sunday 24 April 2016

Sāra Saṅgama 21

ಸಾರ ಸಂಗಮ  by “ತ್ರಿವೇಣಿ ತನಯ

ಸಂಘರ್ಷ

ಬದುಕೆಂದರೆ ಅದು ನಿತ್ಯ ಸಂಘರ್ಷ,
ಅಪೇಕ್ಷಿಸದೆ ಬರುವ ನೋವು ಮತ್ತೆ ಹರ್ಷ,
ನಿನ್ನಿಷ್ಟದಂತೆ ಜಗವ ತಿದ್ದುವದಾಗದ ಮಾತು,
ನಿನ್ನತನ ಬಿಡದೇ ಹೊಂದಿಕೊಂಡರೆ ನಿಂದೇನು ಹೋಯ್ತು?

ಇಷ್ಟ -ಕಷ್ಟ

ನಿನ್ನಿಷ್ಟದಂತೆ ಪರರಿರಲಿ ಎಂಬಪೇಕ್ಷೆ ಸಲ್ಲ,
ಜೀವಸ್ವಭಾವಗಳ ಎಂದೂ ಬದಲಿಸಲಾಗಲ್ಲ,
ಬೇಕು ಬೇಡಗಳವು ಅವರವರ ರೀತಿ,
ಅಂಟದಂತಿದ್ದು ಹೊಂದಿಕೊಳ್ಳುವುದೇ ನೀತಿ.

ಯೋಗ್ಯ

ಯೋಗ್ಯ ಅಯೋಗ್ಯಗಳು ಸಾರ್ವತ್ರಿಕವಲ್ಲ,
ಜೀವಿಗಳಿಗನುಸಾರ ಬದಲಾಗುವವೇ ಎಲ್ಲ,
ಯಾರೆಂತೇ ಇರಲಿ ಅಂಟದಂತಿರುವುದೇ ಯೋಗ್ಯ,
ಬೆರೆತು ಬಾಳುತ "ನಿರ್ಲಿಪ್ತ "ನಾಗುವುದೇ ಭಾಗ್ಯ.

ಕರ್ಮ -ಧರ್ಮ

ನಿನ್ನ ಕರ್ಮ ಅಗಾಧವಿರೆ ದೈವವ ಹಳಿಯಬೇಡ,
ನೀ ತಂದ ಬುತ್ತಿ ಬಿಚ್ಚಿ ಉಣ್ಣುತಿಹೆ ನೀ ನೋಡ,
ಖಾಲಿ ಮಾಡುತ ಬುತ್ತಿ ಹಚ್ಚು ಜ್ಞಾನ ಭಕುತಿಯ ಬತ್ತಿ,
ಕಟ್ಟು ಜ್ಞಾನದಾ ಬುತ್ತಿ ಸಾಧು ಸಜ್ಜನರ ಬೆನ್ಹತ್ತಿ.

ಒಗ್ಗಟ್ಟು -ಬಿಕ್ಕಟ್ಟು

ಆಗಬೇಕಾಗಿರುವುದು ಹಿಂದುಗಳ ಒಗ್ಗಟ್ಟು,
ಮುಗಿಯದ ಹಾಡು ಒಳಪಂಗಡಗಳ ಬಿಕ್ಕಟ್ಟು,
ಬ್ರಿಟಿಷರು ಬಿಟ್ಟು ಹೋಗಿದ್ದು ಒಡೆದು ಆಳುವ ನೀತಿ,
ನಮ್ಮವರೂ ಮುಂದುವರೆಸಿದ್ದಾರೆ ಓಟಿಗೆ ಅದೇ ರೀತಿ.

(Contributed by Shri Govind Magal)

Saturday 23 April 2016

Sāra Saṅgama 20

ಸಾರ ಸಂಗಮ  by “ತ್ರಿವೇಣಿ ತನಯ

ಅವನ್ಯಾರು? - ಎಲ್ಲ(ದ)ರ  ಬೇರು!

ಬಾನಿಗೆ ಬಣ್ಣ ಬಳಿದವನ್ಯಾರು,
ಮೋಡದಿ ನೀರ ಇಟ್ಟವನ್ಯಾರು,
ಇಳೆಗೆ ಹಸಿರು ಸೀರೆ ಕೊಟ್ಟವನ್ಯಾರು,
ಸಾಗರದ ನೀರಿಗೆ ಉಪ್ಪಿಟ್ಟವನ್ಯಾರು,
ನದಿಗಳ ನೀರಿಗೆ ಬೆಲ್ಲ ಬಿಟ್ಟವನ್ಯಾರು,
ಬೆಟ್ಟದಿ ಮರಗಳ ನೆಟ್ಟವನ್ಯಾರು

ಸೂರ್ಯನಲಿ ಶಾಖ ಬೆಳಕಿಟ್ಟವನ್ಯಾರು,
ಚಂದ್ರನಿಗೆ ತಂಬೆಳಕು ಕೊಟ್ಟವನ್ಯಾರು,
ತಾರೆಗಳಲಿ ಹೊಳಪು ತುಂಬಿದವನ್ಯಾರು,
ಫಲಗಳಲಿ ತರ ತರ ಸಿಹಿ ಇಟ್ಟವನ್ಯಾರು,
ತರ ತರ ಜೀವರಾಶಿಗಳ ಕೆಳಬಿಟ್ಟವನ್ಯಾರು,
ತಾರತಮ್ಯದಿ ಮತಿ ಇಟ್ಟವನ್ಯಾರು.

ಆಟಕೆ ಬಿಟ್ಟು ಕೂತವನ್ಯಾರು
ನಾಟಕ ಮುಗಿಸಿ ಬನ್ನಿ ಎಂದವನ್ಯಾರು,
ನೋಟಕೆ ಎಂದೂ ಸಿಗದವನ್ಯಾರು,
ಬೂಟಕದಾಟಕೆ ದಕ್ಕದವನ್ಯಾರು,
ಹೊರಗಣ್ಣಿಗೆ ಕಾಣದ ಮಾಂತ್ರಿಕನ್ಯಾರು,
ಒಳಗಣ್ಣ ಅನುಭವಕೆ ಸಿಗುವವನ್ಯಾರು.


(Contributed by Shri Govind Magal)

Friday 22 April 2016

Sāra Saṅgama 19

ಸಾರ ಸಂಗಮ  by “ತ್ರಿವೇಣಿ ತನಯ

ಬೇಡ ಹುಚ್ಚು -ಸೃಷ್ಟಿಯ ಮೆಚ್ಚು

ಭಗವಂತನ ಮೆಚ್ಚಿಸುವ ಹುಚ್ಚು,
ಅವನ ಸೃಷ್ಟಿಯನೇ ಮೆಚ್ಚದಾ ಕೆಚ್ಚು,
ಮೊದಲು ಅಹಂಕಾರದ ಅಂಗಿಯಾ ಬಿಚ್ಚು,
ವಿನಯದಿ ಬಾಗುತಾ ಪ್ರೀತಿ ದೀಪವ ಹಚ್ಚು.

ಅವನ ಜಗ -ಎಲ್ಲರಿಗೂ ಜಾಗ

ಹುಟ್ಟು ಕುರುಡ ಕಿವುಡ ಮೂಗ,
ಎಲ್ರಿಗೂ ಇದೆ ಅವನ ಜಗದಲಿ ಜಾಗ,
ನಮ್ಮ ಸೀಮಿತ ದೃಷ್ಟಿ-ಆ ಮತ-ಈ ಮತ,
ಎಲ್ಲರಿಗೂ ಒದಗುವ ಅವ ಸೀಮಾತೀತ.

ಮಾಗದ ಮನುಜ -ಅಜ್ಞಾನದ ಕಣಜ

ಯಾರೆಷ್ಟೇ ಹೇಳಿದ್ರೂ ತಿದ್ದಿಕೊಳ್ಳದ ಮನುಜ,
ಎಲ್ಲರೂ ಅವರವರ ಪಾಲಿಗೆ ಜ್ಞಾನದ ಕಣಜ,
ಮೊದಲು ಅವನ ಇತಿಮಿತಿಗಳೆ ಅವನಿಗೆ ಗೊತ್ತಿಲ್ಲ,
ಮಿತಿಯಿಲ್ಲದವನ ತಿಳಿವುದೆಂತು "ಅಮಿತ"ನೇ ಬಲ್ಲ.

ವಿಧಿ -ನಿಷೇಧ

ನಿನ್ನ ಸ್ಮರಣೆ ವಿಧಿ -ವಿಸ್ಮರಣೆ ನಿಷೇಧ,
ಸ್ಮರಣೆಯೊಂದೇ ದುರಿತಗಳ ದಿವ್ಯೌಷಧ,
ಎನ್ನ ಲೆಕ್ಕಕನುಗುಣ ಬರುವುದೆಲ್ಲ ಬರಲಿ,
ಪ್ರತಿಕ್ಷಣ ನಿನ್ನ ಸ್ಮರಣೆಯದು ತಪ್ಪದಿರಲಿ.

ವ್ಯವಸ್ಥೆ -ದುರವಸ್ಥೆ

ಅರ್ಥಹೀನ ಸಮಾಜ ವ್ಯವಸ್ಥೆ,
ಅದಕೆಂದೇ ಎಲ್ಲೆಲ್ಲೂ ದುರವಸ್ಥೆ,
ಎಲ್ಲರಲ್ಲೂ ಮಿತಿಮೀರಿದ ಅಶಿಸ್ತು,
ಶಿಸ್ತಿದ್ದವನೇ ಇವರ ಮಧ್ಯೆ ಬೇಸ್ತು.


(Contributed by Shri Govind Magal)

Wednesday 20 April 2016

Prātaḥ Shloka from Vālmīki Rāmāyaṇa

Ślōka from Bala Kāṅḍa 1-23-2
                                                                            
कौसल्या सुप्रजा राम पूर्वासन्ध्या प्रवर्तते।
उत्तिष्ठ नरशार्दूल कर्त्तव्यं दैवमाह्निकम्॥

kausalyā suprajā rāma pūrvāsandhyā pravartatē
uttiṣṭha naraśārdūla karttavyaṁ daivamāhnikam

This is an incantation that was composed by Sage Viśvāmitra, asking Rāma and Lakshmana to arise from the night’s sleep.

Rāma and Lakṣmana, as children, in deep sleep in the wee hours of the day is when their Guru Sage Viśvāmitra, awakens them through this melodious, inspirational verse. What does this mean?
Apparent meaning:

O Kausalyā’s blessed son Rāma, dawn is just round the corner. Wake up, O my brave ‘lion-man’ (one who stands out among humans as the best) and perform your morning obeisance and prayers to prepare you for the day’s duties. 

How should we internalize this as prayer when we wake up?

kausalyā suprajā – progeny of those who are capable – Kausalyā, though not an exact meaning from the lexicon, points to kushala or ‘capable;’ kausalyā can be taken to mean he / she who has gained capability from a conducive environment – thanks to the forefathers and others too; suprajā means (su) good, knowledgeable (prajā) - we need to respect our forefathers for the environment, education and skillsets they have provided to us and what has shaped us as good and capable beings.

Rāma – happiness, bliss, ānanda; happiness is the first choice you should make, as you wake up. Tell yourself, today, I choose happiness as my mental environment. A happy mind, deals with the outside world better. Happiness is in you, not outside. It is not external factors that give you happiness or contentment, it is your own mind. Condition it therefore even as you wake up, to choose happiness at the start of the day.

purvāsandhyā pravartatē – prior to the onset of light in your waking stages. In other words, before other issues or knowledge of other issues dawns on you.

uttiṣṭha naraśārdūla – wake up, my lion amongst men – the next quality that the mind needs, is courage. Here lion is a metaphor to indicate bravado but one has to remember, this is preceded by a happy mind which is invoked first. So you condition your mind to be happy and courageous, come what may, during the day you are to encounter, ahead!

karttavyaṁ daivamāhnikam – perform your actions as prayerful duty to God; be selfless in what you do. How? ‘All work is God’s work, all work is carried through me by God, all work performed by me is as ordained by God, for my betterment, no matter what the result is!’ The best results, long term, accrue to us, when we work selflessly, excellence, not reward, should be our chief motive in work; reward follows. A reward that is hanging is like a carrot that dangles in front of a horse!

This is a beautiful incantation which, if understood properly, motivates you to condition your mind and set it to appreciate your surroundings, choose happiness, invoke courage, cultivate selflessness and aim for excellence, just as you wake up to start your day!

Why wake up prior to sun-rise?

It is a well-known fact that light plays a major role in our thought process. Change of light means change of mind – you may experiment with your own mind. (‘Evil men plot in the dark!’ Julius Caesar, Shakespeare)

Just as we step out of darkness to light each day, we catch our mind at that time when light support is absent prior to dawn, so that the ‘seed of ‘bio-feedback’ is watered when the soil is loose’ – we move from a weak part of the day(dark) to a stronger part (light) by preparing our mind, before other thoughts take over, before other slumbering souls wake up and take up our time and energy!

🔹🔹🔹🔹🔹🔹🔹🔹

In this connection, there is a related ślōka from Ācārya Madhva’s Dwādaśa Stōtra. (The Saṁskṛta ślōka is beautifully translated by our Pūjya Ācāryaru and here’s the English version) …

कुरुभुङ्क्ष्वा च कर्म निजं नियतं हरिपाद विनम्र धिया सततं
हरिरेव परो हरिरेव गुरुर्हरिरेव जगत पितृमातृगतिः
Kurubhuṅkṣva ca karma nijaṁ niyataṁ haripāda vinamra dhiyā satataṁ
harirēva parō harirēva gurur'harirēva jagat pitr̥mātr̥gatiḥ

Perform your ordained actions and accept whatever comes your way … let not the awareness of Hari’s feet slip from you … it is Hari the Supreme divinity, Hari is the Guru, refuge, Hari is the Mother & Father of this world …

*      *      *      *
(More : Kannada Version)